ವಿಧಾನಸಭೆ ಚುನಾವಣೆ ಹಿನ್ನೆಲೆ:ಐಪಿಎಲ್ ಪಂದ್ಯ ಶಿಫ್ಟ್

ಬೆಂಗಳೂರು, ಮಾ. 27- ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುರಕ್ಷಿತ ಕೊರತೆ ಎದುರಾಗುವ ದೃಷ್ಟಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳನ್ನು ಶಿಫ್ಟ್ ಮಾಡಿ ಕ್ರೀಡಾಪ್ರೇಮಿಗಳಿಗೆ ತಣ್ಣೀರೆರಚಿದಂತಾಗುತ್ತದೆ ಎಂದು ಭಾವಿಸಲಾಗಿತ್ತು.
ರಾಜ್ಯ ಚುನಾವಣೆ ಐಪಿಎಲ್‍ಗೆ ಅಡ್ಡಿಯಾಗಿಲ್ಲ. ಮೇ 12 ರಂದು ಚುನಾವಣೆಯ ಮತದಿನವಾಗಿರುವುದರಿಂದ ಅಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್‍ಡೆವಿಲ್ಸ್ ನಡುವೆ ನಡೆಯುವ ಪಂದ್ಯವನ್ನು ಬೇರೆಡೆಗೆ ಶಿಫ್ಟ್ ಆಗಲಿದೆ.

ಮೇ 15 ರಂದು ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಮೇ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‍ಸಿಬಿ ಹಾಗೂ ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆಯಲಿರುವ ಪಂದ್ಯ ಎಂದಿನಂತೆ ನಡೆಯುವ ಲಕ್ಷಣಗಳಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳು:
ಏ.13- ಆರ್‍ಬಿಸಿ ಗಿ/S ಕಿಂಗ್ಸ್ ಇಲೆವೆನ್ ಪಂಜಾಬ್
ಏ.15- ಆರ್‍ಸಿಬಿ ಗಿ/S ರಾಜಸ್ಥಾನ್ ರಾಯಲ್ಸ್
ಏ.25- ಆರ್‍ಸಿಬಿ ಗಿ/S ಚೆನ್ನೈ ಸೂಪರ್‍ಕಿಂಗ್ಸ್
ಏ.29- ಆರ್‍ಸಿಬಿ ಗಿ/S ಕೋಲ್ಕತ್ತಾ ನೈಟ್‍ರೈಡರ್ಸ್
ಮೇ 1- ಆರ್‍ಸಿಬಿ ಗಿ/S ಮುಂಬೈ ಇಂಡಿಯನ್ಸ್
ಮೇ 12- ಆರ್‍ಸಿಬಿ ಗಿ/S ರಾಜಸ್ಥಾನ್ ರಾಯಲ್ಸ್
ಮೇ 17- ಆರ್‍ಸಿಬಿ ಗಿ/S ಸನ್‍ರೈಸರ್ಸ್ ಹೈದ್ರಾಬಾದ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ