ರಾಮನವಮಿ ಪ್ರಯುಕ್ತ 90 ಸನ್ಯಾಸಿಗಳಿಗೆ ಸನ್ಯಾಸ ದೀಕ್ಷೆ -ಯೋಗ ಗುರು ರಾಮದೇವ್

ಹರಿದ್ವಾರ, ಮಾ.26-ಪತಂಜಲಿ ಆಯುರ್ವೇದ ಉತ್ಪನ್ನಗಳ ರೂವಾರಿ ಹಾಗೂ ಯೋಗ ಗುರು ರಾಮದೇವ್ ರಾಮನವಮಿ ಪ್ರಯುಕ್ತ ಇಂದು ಹರಿದ್ವಾರದಲ್ಲಿ 90 ಸನ್ಯಾಸಿಗಳಿಗೆ ಸನ್ಯಾಸ ದೀಕ್ಷೆ ಬೋಧಿಸಿದರು. ಕುಟುಂಬದ ಸದಸ್ಯರುಗಳ ಸಮ್ಮುಖದಲ್ಲಿ ಪವಿತ್ರ ನಗರಿ ಹರಿದ್ವಾರದ ಗಂಗಾ ನದಿ ದಂಡೆ ಮೇಲೆ 51 ಸನ್ಯಾಸಿಗಳು ಮತ್ತು 39 ಸನ್ಯಾಸಿನಿಯರಿಗೆ ಅವರು ದೀಕ್ಷೆ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸನ್ಯಾಸತ್ವ ಅತ್ಯಂತ ಪವಿತ್ರವಾದ ಕಾರ್ಯ. ಈ ದೀಕ್ಷೆ ಮೂಲಕ ಮನುಕುಲ, ಸಮಾಜ ಮತ್ತು ದೇಶಕ್ಕೆ ಸೇವೆ ಮಾಡಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಮೂಲಕ 90 ಸನ್ಯಾಸಿಗಳು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ