
ಆ್ಯಂಕರ್: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲೆಂದು ಕೊಪ್ಪಳದಲ್ಲಿ ಜನತಾದಳ ಕಾರ್ಯಕರ್ತರು, ಅಗ್ನಕುಂಡ ಹಾಯ್ದಿದ್ದಾರೆ. ಹಿಟ್ನಾಳ ಗ್ರಾಮದಲ್ಲಿ ನಡೆದ ಗ್ರಾಮದೇವತೆ ದುರ್ಗಾ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷ ಅಗ್ನಿಕುಂಡು ತುಳಿಯುತ್ತಾರೆ. ಈ ರೀತಿ ಹರಕೆ ಹೊತ್ತವರು ಅಗ್ನಿಕುಂಡ ತುಳಿಯುವುದರಿಂದ ತಾವು ಅಂದುಕೊಂಡ ಕೆಲಸ ಆಗುತ್ತಂತೆ.ಈಗಾಗಿ ಜೆಡಿಎಸ್ ಮುಖಂಡ ಕೆಎಂ ಸೈಯದ್ ಕೊಪ್ಪಳ ಶಾಸಕರಾಗಲಿ, ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಅಂತ ಜೆಡಿಸ್ ಅಭಿಮಾನಿ ವಿಶೇಷವಾಗಿ ಅಗ್ನಿಕುಂಡ ತುಳಿದಿದ್ದಾರೆ.