ರಾಜ್ಯ ವಕೀಲರ ಪರಿಷತ್‍ಗೆ ಚುನಾವಣೆ:

ತುಮಕೂರು, ಮಾ.26-ರಾಜ್ಯ ವಕೀಲರ ಪರಿಷತ್‍ಗೆ ನಾಳೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಸುಪ್ರೀಂಕೋರ್ಟ್ ವಕೀಲ ಆರ್.ಎಸ್.ರವಿ ಅವರನ್ನು ಬೆಂಬಲಿಸಬೇಕೆಂದು ತುಮಕೂರು ಜಿಲ್ಲಾ ವಕೀಲರ ವೇದಿಕೆ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ ಮನವಿ ಮಾಡಿದ್ದಾರೆ.
ಕೆಳಹಂತದ ಕೋರ್ಟ್, ಹೈಕೋರ್ಟ್, ಟ್ರಿಬಿನಲ್, ಸುಪ್ರೀಂಕೋರ್ಟ್‍ಗಳಲ್ಲಿ ಕಾವೇರಿನ ನೀರಿನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕ ವಕೀಲರ ತಂಡದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ್ದರು.
ರೈತರ ಮಗನಾಗಿ ಹುಟ್ಟಿ , ತಮ್ಮ ವಕೀಲ ವೃತ್ತಿ ಜೀವನದಲ್ಲಿ ಸರಳ ಸಜ್ಜಿನಿಕೆಯನ್ನು ಮೈಗೂಡಿಸಿಕೊಂಡು 31 ವರ್ಷಗಳ ಸುದೀರ್ಘ ವಕೀಲ ವೃತ್ತಿಯನ್ನು ದಕ್ಷ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಬಂದಿದ್ದಾರೆ.
ಬಾರ್ ಕೌನ್ಸಿಲ್‍ಗೆ ಹೊಸ ರೂಪ ಕೊಟ್ಟು , ವಕೀಲರ ಮತ್ತು ಪರಿಷತ್‍ನ ಗೌರವ ಎತ್ತಿ ಹಿಡಿಯಲು ರವಿ ಅವರು ಶ್ರಮಿಸಲು ಮುಂದಾಗಿದ್ದಾರೆ. ಹಾಗಾಗಿ ಇವರನ್ನು ಬೆಂಬಲಿಸಬೇಕೆಂಬು ಬಿ.ಜಿ.ಕೃಷ್ಣಪ್ಪ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ