![Thief-17122017074544-1000x0](http://kannada.vartamitra.com/wp-content/uploads/2018/03/Thief-17122017074544-1000x0-678x381.jpg)
ಮಂಡ್ಯ, ಮಾ.16-ನಗರದ ಉದ್ಯಮಿಯೊಬ್ಬರು ಆಗಷ್ಟೇ ಬ್ಯಾಂಕ್ನಿಂದ ಹಣ ಡ್ರಾ ಮಾಡಿ ಕಾರಿನಲ್ಲಿಟ್ಟಿದ್ದ 1.40 ಲಕ್ಷ ರೂ.ಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಪೂರ್ವ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಗುತ್ತಲು ಬಡಾವಣೆಯ ಉದ್ಯಮಿ ಮೀರ್ ಅಪ್ಪಾಬ್ ಎಂಬುವರು ಹಣ ಕಳೆದುಕೊಂಡರು. ನಿನ್ನೆ ನಗರದ ಸೌತ್ ಇಂಡಿಯನ್ ಬ್ಯಾಂಕ್ನಿಂದ 1.40 ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಹಿಂದಿರುಗುವಾಗ 100 ಅಡಿ ರಸ್ತೆ ಸಮೀಪದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಕೆಲಸ ನಿಮಿತ್ತ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾರೆ. ಸಮಯ ಸಾಧಿಸಿದ ಕಳ್ಳರು ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ 1.40 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಪೂರ್ವ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.