ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ

ವಿಜಯಪುರ, ಮಾ.16- ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ರಾಜಸ್ವ ತಂದುಕೊಡುವ ಝಳಕಿ ಆರ್‍ಟಿಒ ಚೆಕ್‍ಪೆÇೀಸ್ಟ್ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್‍ಟಿಒ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಝಳಕಿ ಸಮೀಪದ ಈ ಆರ್‍ಟಿಒ ಚೆಕ್‍ಪೆÇೀಸ್ಟ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಎಸ್‍ಪಿ ಅಮರನಾಥರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿಎಸ್‍ಪಿ ಮಲ್ಲೇಶ್ ದೊಡಮನಿ ನೇತೃತ್ವದ ತಂಡ ದಾಳಿ ನಡೆಯಿತು.
ಚೆಕ್‍ಪೆÇೀಸ್ಟ್‍ನಲ್ಲಿದ್ದ 25 ಸಾವಿರ ರೂ. ನಗದು ಮತ್ತು ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡು ಕಚೇರಿಯನ್ನು ಅಧಿಕಾರಿಗಳು ಪರಿಶೀಲಿಸಿದರು.  ಈ ವೇಳೆ ಮೋಟಾರ್ ವೆಹಿಕಲ್ ಇನ್ಸ್‍ಪೆಕ್ಟರ್ ರಂಜಿತ್ ಹಾಗೂ ಅಲ್ಲಿದ್ದ ಐದು ಮಂದಿ ಏಜೆಂಟ್‍ಗಳು, ಇಬ್ಬರು ಹೋಮ್‍ಗಾರ್ಡ್‍ಗಳನ್ನು ವಶಕ್ಕೆ ಪಡೆಯಲಾಗಿದೆ.  ಕಳೆದ ವರ್ಷ ಮಾ.7ರಂದು ಕೂಡ ಇದೇ ಚೆಕ್‍ಪೆÇೀಸ್ಟ್ ಮೇಲೆ ಎಸಿಬಿ ದಾಳಿ ನಡೆದಿದ್ದುದನ್ನು ಸ್ಮರಿಸಬಹುದು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ