ತುಮಕೂರು, ಮಾ.3- ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 5 ಕ್ವಿಂಟಾಲ್ ಅಡಿಕೆ, ಲಕ್ಷಾಂತರ ಮೌಲ್ಯದ ದವಸ-ಧಾನ್ಯ, ಮೂರು ಲಕ್ಷ ನಗದು , 1 ಲಕ್ಷ ಮೌಲ್ಯದ ಆಭರಣ ಸುಟ್ಟು ಕರಕಲಾಗಿರುವ ಘಟನೆ ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ದೊಡ್ಡಗುಣಿ ಗ್ರಾಮದ ಸಮೀಪವಿರುವ ದಿಂಡಗದಹಳ್ಳಿ ಹಟ್ಟಿ ಗ್ರಾಮದ ವಾಸಿ ಮಹಾಲಿಂಗಯ್ಯ ಅವರಿಗೆ ಸೇರಿದ ಮನೆಗೆ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಬೆಂಕಿ ಬಿದ್ದಿದ್ದು , ನೋಡು ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಮನೆಯೆಲ್ಲಾ ಆವರಿಸಿ ಕುಟುಂಬ ಸದಸ್ಯರ ಕಣ್ಣೆದುರೇ ಸುಟ್ಟು ಕರಕಲಾಗಿದೆ.
ಕಣ ಒಕ್ಕಣೆ ಮಾಡಿ 5 ಕ್ವಿಂಟಾಲ್ ರಾಗಿ, ಅಕ್ಕಿ , ಹೆಸರುಕಾಳು, 5 ಕ್ವಿಂಟಾಲ್ ಅಡಕೆ, 4 ಕ್ವಿಂಟಾಲ್ ರಾಗಿಯನ್ನು ದಾಸ್ತಾನು ಮಾಡಿದ್ದರು. ಇನ್ನು ಹೊಸ ಮನೆ ಕಟ್ಟುವುದಕ್ಕಾಗಿ 3 ಲಕ್ಷ ಹಣವನ್ನು ಸಹ ಮನೆಯಲ್ಲಿ ಇಟ್ಟುಕೊಂಡಿದ್ದರು. ಬೆಂಕಿಗೆ ಎಲ್ಲವೂ ಸುಟ್ಟು ಹೋಗಿದ್ದು, ಕುಟುಂಬ ಬೀದಿ ಪಾಲಾಗಿದೆ.
ಸ್ಥಳಕ್ಕೆ ಗುಬ್ಬಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ