ಅಕ್ರಮ ಶಸ್ತ್ರಾಸ್ತ ಹೊಂದಿದ ನಾಲ್ವರನ್ನು ಮಾರಕಾಸ್ತ್ರಗಳ ಸಹಿತ ಬಂಧಿಸುವಲ್ಲಿ ನಂಜನಗೂಡು ಪೆÇಲೀಸರು ಯಶಸ್ವಿ

ನಂಜನಗೂಡು, ಮಾ.3- ಅಕ್ರಮ ಶಸ್ತ್ರಾಸ್ತ ಹೊಂದಿದ ನಾಲ್ವರನ್ನು ಮಾರಕಾಸ್ತ್ರಗಳ ಸಹಿತ ಬಂಧಿಸುವಲ್ಲಿ ನಂಜನಗೂಡು ಪೆÇಲೀಸರು ಯಶಸ್ವಿಯಾಗಿದ್ದಾರೆ.
ಬಂದಿತರಿಂದ 1 ಪಿಸ್ತೂಲ್ 12 ಸಜೀವ ಗುಂಡುಗಳನ್ನು ವಶಪಡಿಸಿಕೊಂಡ ಪೆÇಲೀಸರು ನಂಜನಗೂಡಿನಲ್ಲಿ ಉಂಟಾಗಬಹುದಾದ ದೊಡ್ಡ ಅನಾಹುತವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಸಿಪಿಐ ಗೋಪಾಲಕೃಷ್ಣ ರವರ ತಂಡ ಪಟ್ಟಣದ ಊಟಿ ರಸ್ತೆಯ ಚೆರ್ಚ್ ಹಿಂಬಾಗದ ಬಡಾವಣೆಯಲ್ಲಿ ಕೂಡಿಕೊಂಡು ವ್ಯವಹಾರ ನಡೆಸುತ್ತಿದ್ದ ಇಲ್ಲಿನ ಶಂಕರಪುರದ ಧನರಾಜ್ ಬೂಲಾ, ನೀಲಕಂಠನಗರ ನಿವಾಸಿ ಸಾಧೀಕ್ ಖಾನ್ , ಶೈಹನ್ ಶಾ ನನ್ನು ಬಂಧಿಸಿ ಅವರಿಂದ ಸ್ಥಳದಲ್ಲೇ ಪಿಸ್ತೂಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಈ ಮೂವರಿಗೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತೀರುವ ಅಪ್ಸ್‍ರ್ ಖಾನ್ ಎಂಬಾತನ ನಂಟು ಬೆಳೆದ ಪರಿಣಾಮ ಅಕ್ರಮ ಶಸ್ತ್ರಾಸ್ತ ದಕ್ಷಿಣಾ ಕಾಶಿ ನಂಜನಗೂಡಿಗೆ ಕಾಲಿಡುವಂತಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈಗಾಗಲೇ 2 ಕೊಲೆಗಳಲ್ಲಿ ಬಾಗಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತೀರುವ ಅಪ್ಸ್‍ರ್ ಖಾನ್ ಜೈಲಿನಿಂದಲೇ ಧನರಾಜ್ ಬೂಲಾಗೆ ಉತ್ತರ ಪ್ರದೇಶದ ಮೂಲದ ಶಸ್ತ್ರಾಸ್ತ ಮಾರಾಟಗಾರನ ಖಚಿತ ವಿಳಾಸ ನೀಡಿ ಈ ಪಿಸ್ತೂಲ್ ಹಾಗೂ ಗುಂಡುಗಳು ಧನರಾಜ್ ಬೂಲಾ ಕೈ ಸೇರುವಂತೆ ವ್ಯವಹಾರ ನಡೆಸಿದ್ದ ಎಂದು ಹೇಳಲಾಗಿದೆ.
ಈ ಪ್ರಕರಣದ ಹಿಂದೆ ಭಾರೀ ಜಾಲ ಕೆಲಸ ಮಾಡುತ್ತಿದ್ದು, ಪೆÇಲೀಸರ ತನಿಖೆಯಿಂದ ಈ ಕುರಿತು ಇನ್ನಷ್ಟು ಪ್ರಕರಣ ಹೊರ ಬೀಳಬೇಕಾಗಿದೆ.
ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಮತ್ತು ಎಎಸ್‍ಪಿ ರುದ್ರಮುನಿರವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಹಾಗೂ ನಗರ ಪಿಎಸ್‍ಐ ಸವಿ.ಸಿ.ಯು, ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಾಷ, ಸುರೇಶ್, ಅಬ್ದುಲ್, ಮಹೇಶ್, ಕೃಷ್ಣ, ಪ್ರಸನ್ನ ರಪೀಕ್, ಕಾರ್ಯಾಚಾರಣೆ ನಡೆಸಿದ್ದು, ಆರೋಪಿಗಳ ಸತತ ವಿಚಾರಣೆ ನಡೆಸಿ ನಂಜನಗೂಡು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಧೀಶರಾದ ಬಿ.ಪಿ.ದೇವಮಾನೆಯವರು ಈ ಎಲ್ಲಾ ನಾಲ್ವರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಹಾಲಿ ಜೈಲು ವಾಸಿ ಅಪ್ಸ್‍ರ್ ಖಾನ್ ನನ್ನು ಪೆÇಲೀಸರು ವಿಚಾರಣೆಗಾಗಿ ಜೈಲಿನಿಂದ ಹೊರ ತಂದು ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾಗಿ ಹೇಳಲಾಗಿ ಆ ಮೂಲಕ ಅಕ್ರಮ ಶಸ್ತ್ರಾಸ್ತ ಮೂಲ ಹುಡುಕಲು ತನಿಖೆ ಆರಂಭಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ