ಯದುವೀರ-ತ್ರಿಷಿಕಾ ದಂಪತಿ ಪುತ್ರನ ನಾಮಕರಣ

ಬೆಂಗಳೂರು: ಮೈಸೂರು ಮಹಾ ರಾಜ ಯದುವೀರ ಮತ್ತು ತ್ರಿಷಿಕಾ ದಂಪತಿಯ ಪುತ್ರನಿಗೆ  ನಗರದ ಅರಮನೆಯಲ್ಲಿ ಆದ್ಯ ವೀರ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಯಿತು.
ನಾಮಕರಣ ಶಾಸ್ತ್ರಕ್ಕೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಬೆಂಗಳೂರು ಅರಮನೆಗೆ ಒಂದು ದಿನ ಮುನ್ನವೇ ಪ್ರಮೋದಾ ದೇವಿ ಒಡೆಯರ್, ಯದುವೀರ್ ತ್ರಿಷಿಕಾ ದಂಪತಿ ಮಗುವಿನೊಂದಿಗೆ ಆಗಮಿಸಿದ್ದರು.
ಸರಳವಾಗಿ ನಡೆದ ನಾಮಕರಣ ಶಾಸ್ತ್ರಕ್ಕೆ ರಾಜ ಮನೆತನದ ಕೆಲವೇ ಮಂದಿ ಗಣ್ಯರು ಮತ್ತು ಆಪ್ತೇಷರಷ್ಟೆ ಭಾಗವಹಿಸಿದ್ದರು.
ಇಂದು ಬೆಳಿಗ್ಗೆ 11 ಗಂಟೆಗೆ ನಾಮಕರಣ ಶಾಸ್ತ್ರ ನಡೆದಿದ್ದು, ರಾಜ ಮನೆತನದ ಸಂಪ್ರದಾಯದಂತೆ ನಡೆದಿದೆ.
ಮಗುವಿನ ನಾಮಕರಣ ಶಾಸ್ತ್ರ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ