ಬದ್ಗಂ ವಾಯು ನೆಲೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಗುಂಡಿಟ್ಟು ಕೊಂದ ಭದ್ರತಾ ಪಡೆ

ಶ್ರೀನಗರ, ಫೆ.19-ಕಾಶ್ಮೀರದ ಅತಿ ಭದ್ರತೆಯ ಬದ್ಗಂ ವಾಯು ನೆಲೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಹತನಾದ ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾಗಿದೆ.

ಮಧ್ಯರಾತ್ರಿ ಈತ ಭದ್ರತಾ ಬೇಲಿಯನ್ನು ದಾಟಿ ವಾಯು ನೆಲೆಯ ಗೋಡೆ ಬಳಿ ಧಾವಿಸಿದ. ಈತನಿಗೆ ಅಲ್ಲಿನ ಸೆಂಟ್ರಿ ಪುನರಾವರ್ತಿತ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಆತ ಲೆಕ್ಕಸಲಿಲ್ಲ. ಬದಲಿಗೆ ಗೋಡೆ ದಾಟಲು ಯತ್ನಿಸಿದೆ. ಇದರಿಂದ ಸೆಂಟ್ರಿ ಗುಂಡು ಹಾರಿಸಿದ ಪರಿಣಾಮ ಆಗಂತುಕ ಹತನಾದ ಎಂದು ಪೊಲೀಸರ ವಕ್ತಾರರು ತಿಳಿಸಿದ್ದಾರೆ.

ನಂತರ ಹುಮ್‍ಹಾಮಾ ಪೊಲೀಸರು ಠಾಣೆಯ ಸಿಬ್ಬಂದಿಯೊಂದಿಗೆ ಉನ್ನತ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಮೃತ ವ್ಯಕ್ತಿಯು 50-55 ವರ್ಷದವನಾಗಿದ್ದು, ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ