ಕಳ್ಳರು ಮನೆಗೆ ನುಗ್ಗಿ ನಗದು ಹಾಗೂ ದಾಖಲೆ ಪತ್ರಗಳನ್ನು ದೋಚಿ ಪರಾರಿಯಾಗಿದ್ದಾರೆ

ಮಂಡ್ಯ, ಫೆ.14-ಮನೆಯವರು ಮಲಗಿದ್ದ ವೇಳೆ ಕಳ್ಳರು ಮನೆಯ ಹೆಂಚು ತೆಗೆದು ಒಳನುಗ್ಗಿ 5ಸಾವಿರ ನಗದು, ದಾಖಲೆ ಪತ್ರಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶ್ರೀರಂಗಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಂಗಪಟ್ಟಣದ ಗಂಜಾಮ್ ಗ್ರಾಮದ ನಿವಾಸಿ ಸೀತಾರಾಮ್ ಅವರ ಮನೆಯಲ್ಲಿ ಎರಡು ರೂಮ್‍ಗಳಿದ್ದು, ಒಂದು ರೂಮ್‍ನಲ್ಲಿ ಮಲಗಿಕೊಂಡಿದ್ದಾರೆ. ಈ ವೇಳೆ ಕಳ್ಳರು ಮನೆಯ ಹೆಂಚುಗಳನ್ನು ತೆರೆದು ಒಳ ನುಗ್ಗಿ ಇನ್ನೊಂದು ರೂಮ್‍ನಲ್ಲಿದ್ದ ಬೀರುವಿನ ಬೀಗ ಒಡೆದು 5 ಸಾವಿರ ನಗದು, ಮನೆ ದಾಖಲೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಶ್ರೀರಂಗಪಟ್ಟಣ ಠಾಣೆ ಪೋಲೀಸ್ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಪ್ರಾತಿನಿಧ್ಯಕ್ಕಾಗಿ ಫೋಟೋ ಮಾತ್ರ, ಮೂಲವಲ್ಲ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ