ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ

ಶ್ರೀನಗರ, ಫೆ.12-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದು ಶ್ರೀನಗರದ ಕರಣ್ನಗರ್ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ.

ಶ್ರೀನಗರದ ಕೇಂದ್ರೀಯ ಮೀಸಲು ಪೋಲೀಸ್ ಪಡೆ(ಸಿಆರ್ಪಿಎಫ್) ಶಿಬಿರದ ಮೇಲೆ ದಾಳಿ ನಡೆಸಲು ಇಬ್ಬರು ಉಗ್ರರು ಷಡ್ಯಂತ್ರ ರೂಪಿಸಿದ್ದರು. ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧರಾಗಿದ್ದ ಆಕ್ರಮಣಕಾರರು ಇಂದು ಮುಂಜಾನೆ ಕ್ಯಾಂಪ್ನತ್ತ ನುಗ್ಗಿ ಬರುತ್ತಿರುವುದನ್ನು ನೋಡಿದ ಯೋಧರು ಅವರತ್ತ ಗುಂಡು ಹಾರಿಸಿದರು. ತಕ್ಷಣ ಸ್ಥಳದಿಂದ ಭಯೋತ್ಪಾದಕರು ಪರಾರಿಯಾಗಿದ್ದರು.
ಶ್ರೀನಗರದ ಸಿಆರ್ಪಿಎಫ್ ಶಿಬಿರದ ಮೇಲೆ ಮುಗಿಬಿದ್ದು ಸಾಧ್ಯವಾದಷ್ಟು ಯೋಧರನ್ನು ಕೊಂದು ಕ್ಯಾಂಪ್ನನ್ನು ಸ್ಫೋಟಿಸುವುದು ಉಗ್ರರ ಉದ್ದೇಶವಾಗಿತ್ತು.

ಪರಾರಿಯಾದ ಹಂತಕರಿಗಾಗಿ ಶ್ರೀನಗರದ ಕರಣ್ನಗರದಲ್ಲಿ ಇಂದು ಬೆಳಗ್ಗೆ ಯೋಧರು ಶೋಧ ಕಾರ್ಯದಲ್ಲಿ ತೊಡಗಿದ್ದಾಗ ಉಗ್ರರು ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಸೈನಿಕರು ಪ್ರತಿದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ ಸಿಆರ್ಪಿಎಫ್ ಯೋಧರೊಬ್ಬರು ಮೃತಪಟ್ಟಿದ್ದಾರೆ.

ಫೋಟೋ ಕ್ರೆಡಿಟ್: businessline.com(ಪ್ರಾತಿನಿಧ್ಯಕ್ಕಾಗಿ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ