ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಯುವಕ ಸಾವು:

ಬೆಂಗಳೂರು, ಮಾ.28- ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಕಾಟನ್‍ಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಪಶ್ಚಿಮ ಬಂಗಾಳದ ವಿಜಯ್ (25) ಮೃತಪಟ್ಟ ಯುವಕ. ಬೆಂಗಳೂರಿನಲ್ಲಿ ವಾಸವಾಗಿದ್ದ ವಿಜಯ್ ನಿನ್ನೆ ಬೆಳಗಿನ ಜಾವ 3.30ರಲ್ಲಿ ರಾಜಾಜಿನಗರ ರೈಲ್ವೆ ಅಂಡರ್ ಬ್ರಿಡ್ಜ್ ಕಡೆಯಿಂದ ಕೋಡೆ ಸರ್ಕಲ್ ಬಳಿ ಇರಿತಕ್ಕೊಳಗಾಗಿ ಸಹಾಯಕ್ಕಾಗಿ ಓಡಿ ಬರುತ್ತಿದ್ದನು. ಈ ಯುವಕನ ಬಟ್ಟೆಯೆಲ್ಲಾ ರಕ್ತಸಿಕ್ತವಾಗಿದ್ದನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೆÇಲೀಸರು, ತಕ್ಷಣ ಈತನನ್ನು 108 ವಾಹನದಲ್ಲಿ ಚಿಕಿತ್ಸೆಗಾಗಿ ಕರೆದೊಯ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಇರಿತಕ್ಕೊಳಗಾದ ಬಗ್ಗೆ ಪೆÇಲೀಸರು ವಿಚಾರಿಸಿದಾಗ, ನಾನು ನಡೆದು ಬರುತ್ತಿದ್ದಾಗ ಯಾರೋ ಅಡ್ಡಗಟ್ಟಿ ಹಣಕ್ಕೆ ಒತ್ತಾಯಿಸಿದ್ದು, ಹಣ ಕೊಡದ ಕಾರಣ ಚಾಕುವಿನಿಂದ ಎದೆ ಮತ್ತು ಪಕ್ಕೆಗೆ ಇರಿದರೆಂದು ಪೆÇಲೀಸರ ಮುಂದೆ ಹೇಳಿಕೆ ನೀಡಿದ್ದನು. ಇದೀಗ ವಿಜಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‍ಪೇಟೆ ಠಾಣೆ ಪೆÇಲೀಸರು ದುಷ್ಕರ್ಮಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ