ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.11-ಸಾವಿನ ಸಂಭ್ರಮ ಕೊಲೆಯಷ್ಟೇ ಘೋರ ಕೃತ್ಯವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ ಮೂಲಕ ಕಿಡಿಕಾರಿದ್ದಾರೆ.

ಹಿರಿಯ ಸಾಹಿತಿ ವಿಚಾರವಾಧಿ, ಪ್ರಗತಿಪರ ಚಿಂತಕ, ಹೋರಾಟಗಾರ ಗಿರೀಶ್ ಕಾರ್ನಾಡ್ ಅವರ ಸಾವನ್ನು ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದು ಅತ್ಯಂತ ಖಂಡನೀಯ. ಸಾವನ್ನು ಸಂಭ್ರಮಿಸುವುದು ಹತ್ಯೆಯಷ್ಟೇ ಘೋರ ಅಪರಾಧ ಎಂದಿದ್ದಾರೆ.

ಸಾವು ಕಾರ್ನಾಡರದ್ದಾಗಲಿ, ಕಾಂಗ್ರೆಸ್‍ನದ್ದಾಗಲಿ ಅಥವಾ ಬಿಜೆಪಿಯವರದ್ದಾಗಲಿ.ಸೈದ್ಧಾಂತಿಕ ವಿರೋಧಕ್ಕಾಗಿ ಯಾರೂ ಸಂಭ್ರಮಿಸುವಂತ ಶತ್ರುಗಳಾಗಬಾರದು.

ಬಿತ್ತಿದ್ದನ್ನೇ ಫಸಲಾಗಿ ಪಡೆಯುತ್ತೇವೆ. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ ಎಂದು ಟ್ವಿಟ್‍ನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ