ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಾಟಾಏಸ್-ಘಟನೆಯಲ್ಲಿ ಇಬ್ಬರ ಸಾವು

ಚಳ್ಳಕೆರೆ, ಮೇ 10- ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಟಾಟಾಏಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಚಳ್ಳಕೆರೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಚಳ್ಳಕೆರೆಯ ಜನತಾ ಕಾಲೋನಿ ನಿವಾಸಿ ಮಲ್ಲಿಕಾರ್ಜುನ್ (27), ಪಟ್ಟಣದ ತಿಪ್ಪೆಸ್ವಾಮಿ (25) ಮೃತ ದುರ್ದೈವಿಗಳು.ಕಾರ್ತಿಕ್, ಪವನ್, ಜಲೀಲ್, ಮುತ್ತೇಶ್‍ಬಾಬು ಗಾಯಗೊಂಡವರು.

ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಕಾರ್ಯಕ್ರಮಕ್ಕಾಗಿ ಸಾಮಾನುಗಳನ್ನು ತುಂಬಿಕೊಂಡು ಟಾಟಾಏಸ್‍ನಲ್ಲಿ ಚಳ್ಳಕೆರೆ-ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಪಟದ ಬಳಿ ತೆರಳುತ್ತಿದ್ದಾಗ ವಾಹನ ದಟ್ಟಣೆಯಿಂದಾಗಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಾಟಾಏಸ್ ಡಿಕ್ಕಿ ಹೊಡೆದಿದೆ.
ಈ ವೇಳೆ ಪಲ್ಟಿ ಹೊಡೆದ ರಭಸಕ್ಕೆ ಟಾಟಾಏಸ್‍ನಲ್ಲಿದ್ದ ಮಲ್ಲಿಕಾರ್ಜುನ್, ತಿಪ್ಪೆಸ್ವಾಮಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಲ್ವರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಈ ಸಂಬಂಧ ಚಳ್ಳಕೆರೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ