ಮತದಾÀನದ ವೇಳೆ ನಿಯಮ ಬಾಹೀರ ಕ್ರಮ: ಚುನಾವಣಾಧಿಕಾರಿಗೆ ದೂರು; ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್

ಬೆಂಗಳೂರು,ಮಾ.23-ಕಾಂಗ್ರೆಸ್‍ನ ಇಬ್ಬರು ನಾಯಕರು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದ್ದು , ಏಜೆಂಟರ ಗಮನಕ್ಕೆ ಬಂದು ಎರಡು ಬಾರಿ ಮತ ಪತ್ರ ಪಡೆದು ಮತ ಚಲಾಯಿಸಿರುವುದಕ್ಕೆ ನಾವು ಪ್ರತಿಭಟಿಸಿ ದೂರು ನೀಡಿದ್ದೇವೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಚುನಾವಣಾಧಿಕಾರಿಗಳಿಗೂ ದೂರು ನೀಡಿದ್ದೇವೆ. ವೀಕ್ಷಕರಾದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಪ್ಪು ಎಂದೇ ಹೇಳಿದ್ದಾರೆ ಎಂದು ತಿಳಿಸಿದರು.

ಸುಮಾರು20 ಶಾಸಕರು ಅಡ್ಡ ಮತದಾನ ಮಾಡುವವರಿದ್ದರು ಆದರೆ ಕಾಂಗ್ರೆಸ್ ಬೆದರಿಕೆವೊಡ್ಡಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ