ಶ್ರೀ ರಾಘವೇಂದ್ರ ಸ್ವಾಮಿಗಳ 421ನೇ ವರ್ಧಂತಿ ಉತ್ಸವ

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ನಾಲ್ಕುನೂರ ಇಪ್ಪತ್ತೊಂದು ನೇ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ರಾಯರ ಮಠದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಅಧಿಕಾರಿಗಳು ಶ್ರೀ ಶ್ರೀನಿವಾಸನಿಗೆ ಅರ್ಪಿಸಿದ ಶೇಷವಸ್ತ್ರವನ್ನು ಶ್ರೀ ರಾಯರಿಗೆ ಅರ್ಪಿಸಿದರು.

ಶ್ರೀ ರಾಯರ ಮಠದ ಪೀಠಾಧಿಪತಿಗಳು ಈ ಪವಿತ್ರ ಶೇಷವಸ್ತ್ರವನ್ನು ಪಡಲು ಮೆರವಣಿಗೆ ನಡೆಸಿದರು ಜೊತೆಗೆ ರಾಯರ ರಥ, ಜೊತೆಗೆ ಶ್ರೀ ರಾಯರ ರಥೋತ್ಸವ ನಡೆಯಿತು ಇದೇ ವೇಳೆ ತಮಿಳುನಾಡಿನ ಶ್ರೀ ನಾದಹಾರಂ ಟ್ರಸ್ಟ್ ವತಿಯಿಂದ ನಾಲ್ಕುನೂರು ಕಲಾವಿದರಿಂದ ಸಂಗೀತಮಯ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಯುತ್ತಿರುವ ಮಠದ ನವೀಕರಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಇದೇ ವೇಳೆ ಸ್ವಾಮೀಜಿಗಳು ಲಕ್ಷ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀ ಮೂಲರಾಮ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ವಿಶೇಷ ಪೂಜೆ ನೆರವೇರಿಸಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ