ಬ್ಯಾಂಕುಗಳಿಗೆ ಸಾಲ ವಾಪಸ್ ಕೊಡಲು ಸಿದ್ಧನಿದ್ಧೇನೆ: ವಿಜಯ್ ಮಲ್ಯ

ನವದೆಹಲಿ,ಫೆ.14- ಪಡೆದಿರುವ ಸಾಲದ ಮೊತ್ತವನ್ನು ಬ್ಯಾಂಕ್‍ಗಳಿಗೆ ವಾಪಸ್ ಕೊಡಲು ಸಿದ್ಧನಿದ್ದೇನೆ. ಆದರೆ, ಪ್ರಧಾನಿ ಮೋದಿ ಬ್ಯಾಂಕ್‍ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಒಬ್ಬ ಅದ್ಭುತ ಮಾತುಗಾರ. ಮೋದಿ ಮಾಡಿದ ಭಾಷಣದಲ್ಲಿ ನನ್ನ ಹೆಸರನ್ನು ಉಲ್ಲೇಖಿಸದೆ 9 ಸಾವಿರ ಕೋಟಿ ವಂಚನೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ. ಆದರೆ ನಾನು ವಂಚನೆ ಮಾಡಿಲ್ಲ.

ಈಗಲೂ ಕರ್ನಾಟಕ ಹೈ ಕೋರ್ಟ್ ಎದುರು 14 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಟ್ಟಿದ್ದೇನೆ. ಸಾಲ ಮರು ಪಾವತಿಸಲು ಸಿದ್ಧನಿದ್ದರೂ ಅದನ್ನು ತೆಗೆದುಕೊಳ್ಳದೇ ಸಾರ್ವಜನಿಕವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ