ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ: ಅಮೃತ್ ರಾಜ್ ಬಣ್ಣಕ್ಕೆ ಭರ್ಜರಿ ಗೆಲವು

ಬೆಂಗಳೂರು,ಜ.28-ಬಿಬಿಎಂಪಿ ನೌಕರರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಮೃತ್‍ರಾಜ್ ಬಣ ಭರ್ಜರಿ ಗೆಲುವು ಸಾಧಿಸಿದೆ.

ಸಂಘದ ಹದಿಮೂರು ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಮೃತ್‍ರಾಜ್ ಬಣ 11 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಹಿಡಿದಿದೆ.

ನೌಕರ ಸಹಕಾರ ಸಂಘದಲ್ಲಿ ಒಟ್ಟು 3200 ಸದಸ್ಯರಿದ್ದು, ನಿನ್ನೆ ನಡೆದ ಚುನಾವಣೆಯಲ್ಲಿ ಅಮೃತ್‍ರಾಜ್, ಎಚ್.ಸುರೇಶ್, ಮಾರೇಗೌಡ, ಕೆ.ಜಿ.ರವಿ, ವೇಣುಗೋಪಾಲ್, ವಾಣಿ, ಹನುಮಂತಪ್ಪ, ಕಾಂಚನ, ಲಕ್ಷ್ಮಿ, ಮಂಜುನಾಥ್ ಮತ್ತು ರಾಜಶೇಖರ್ ಗೆಲುವು ಸಾಧಿಸಿದ್ದಾರೆ.

ಅಮೃತ್‍ರಾಜ್ ಬಣದ ವಿರುದ್ದ ಸ್ಪರ್ಧಿಸಿದ್ದ ಮಾಯಣ್ಣ ಬಣಕ್ಕೆ ಹೀನಾಯ ಸೋಲಾಗಿದ್ದು, ಆ ಬಣದ ಮಾಯಣ್ಣ ಮತ್ತು ಬಾಬು ಎಂಬುವರು ಮಾತ್ರ ಗೆಲುವು ಸಾಧಿಸಿದ್ದಾರೆ.

ಹರ್ಷ: ಬಿಬಿಎಂಪಿ ನೌಕರ ಸಹಕಾರ ಸಂಘದಲ್ಲಿ ಸತತ 4ನೇ ಬಾರಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಅಮೃತ್‍ರಾಜ್ ಬಣ ಯಶಸ್ವಿಯಾಗಿದೆ.ತಂಡದ 11 ಅಭ್ಯರ್ಥಿಗಳ ಜಯಕ್ಕೆ ಕಾರಣರಾದ ಎಲ್ಲ ಅಧಿಕಾರಿ ಮತ್ತು ನೌಕರರ ಬಣಕ್ಕೆ ಅಮೃತ್‍ರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ