ಭಕ್ತರು ಮಠಕ್ಕೆ ಆಗಮಿಸುವುದಕ್ಕೆ ಸುಲಭವಾಗಲೆಂದು ಎಲ್ಲಾ ಟೋಲ್ ಗೇಟ್ ತೆರೆದಿರುವಂತೆ ಸೂಚನೆ

ತುಮಕೂರು, ಜ.22- ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ -ತುಮಕೂರಿನ ಕ್ಯಾತಸಂದ್ರದ ತನಕ ಇಂದು ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ಎಲ್ಲ ಟೋಲ್ ಗೇಟ್ ತೆರೆದಿರುವಂತೆ ಎನ್‍ಎಚ್‍ಎಐ ಸೂಚನೆ ನೀಡಿದೆ.

ಇನ್ನು ಎನ್‍ಎಚ್‍ಎಐ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಟೋಲ್ ಗಳನ್ನು ತೆರೆದಿದ್ದು, ಶ್ರೀ ಮಠಕ್ಕೆ ಭಕ್ತರು ಆಗಮಿಸುವುದಕ್ಕೆ ಸುಲಭವಾಗಿದೆ ಎಂದು ಭಕ್ತರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ