ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರನಾಗಿರುವ 16 ವರ್ಷದ ಬಾಲಕ ವಿನಾಯಕ

ಬೆಂಗಳೂರು,ಜ.21- ಹಲವಾರು ಕ್ಷೇತ್ರಗಳಲ್ಲಿ ನೈಪುಣ್ಯತೆ ಪಡೆದಿರುವ ಬಹುಮುಖ ಪ್ರತಿಭೆ 16 ವರ್ಷದ ಬಾಲಕ ವಿನಾಯಕ.ಎಂ ಅವರು ರಾಷ್ಟ್ರಪತಿ ಪುರಸ್ಕಾರ ಹಾಗೂ ಬಾಲ ಶಕ್ತಿ ಪುರಸ್ಕಾರಕ್ಕೆ ಪಾತ್ರನಾಗಿದ್ದಾನೆ.

ನಾಳೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಿಂದ ಪುರಸ್ಕಾರ ಪಡೆಯುತ್ತಿದ್ದು, ಅದರೊಂದಿಗೆ ಒಂದು ಲಕ್ಷ ರೂ. ಬಹುಮಾನ, ಹತ್ತು ಸಾವಿರ ರೂ.ಬುಕ್‍ವೋಚರ್, ಪದಕ ದೊರೆಯಲಿದೆ.

ಜ.26ರಂದು ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲೂ ಭಾಗವಹಿಸಲಿದ್ದಾನೆ. ಇದು ಮಕ್ಕಳ ವಿಭಾಗದಲ್ಲಿ ಪ್ರಥಮ ನಾಗರೀಕ ಪ್ರಶಸ್ತಿಯಾಗಿದ್ದು ಕಲೆ ಮತ್ತು ಸಂಸ್ಕøತಿ ವಿಭಾಗದಲ್ಲಿ ವಿನಾಯಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.

450 ಕ್ಕೂ ಹೆಚ್ಚುಪ್ರಶಸ್ತಿ,ಬಹುಮಾನ ಹಾಗೂ ಪುರಸ್ಕಾರಗಳನ್ನು ಪಡೆದಿರುವ ವಿನಾಯಕ ಕಳೆದ ವರ್ಷ ಲಖ್ನೋದಲ್ಲಿ ನಡೆದ ಕ್ಲಾಸಿಕಲ್ ವಾಯ್ಸ್ ಆಫ್ ಇಂಡಿಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಕ್ಲಾಸಿಕಲ್ ವಾಯ್ಸ್ ಆಫ್ ಕರ್ನಾಟಕ ಬಿರುದನ್ನು ಮುಡಿಗೇರಿಸಿಕೊಂಡಿದ್ದಾನೆ.

ಎರಡು ಸುತ್ತಿನ ಸ್ಪರ್ಧೆಯ ನಂತರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ರಾಷ್ಟ್ರಮಟ್ಟದ ಅಂತಿಮ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.

ಇದಲ್ಲದೆ 2015ರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕಾಗಿ ರಾಜ್ಯ ಪ್ರಶಸ್ತಿ ಕಲಾಶ್ರೀಯನ್ನು ಬಾಲಭವನ, ಬೆಂಗಳೂರನ್ನು ಪ್ರತಿನಿಧಿಸುತ್ತಾ ಗೆದ್ದಿದ್ದಾನೆ.
ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಈತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ತಬಲಾ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ