ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿಗೆ 21 ಮಕ್ಕಳ ಆಯ್ಕೆ

ಬೆಂಗಳೂರು, ಜ.21- ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ನೀಡುವ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿಗೆ 21 ಮಕ್ಕಳು ಬಾಜನರಾಗಿದ್ದಾರೆ.
ಶಿವಮೊಗ್ಗದ ಬಾಲಕ ಕೃಷ್ಣಾನಾಯಕ್ ಮೂಲತಃ ದಾವಣಗೆರೆಯ ಜಗಳೂರು ತಾಲ್ಲೂಕಿನ ನಿವಾಸಿಯಾಗಿದ್ದು, ಶಿವಮೊಗ್ಗದ ಸೇವಾಲಾಲ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

2017ರ ಸೆಪ್ಟೆಂಬರ್ 23ರಂದು ತುಂಗಾನದಿಯ ನವುಲೆಯ ತ್ರಿಮೂರ್ತಿನಗರದ ಕಾಲುವೆಯಲ್ಲಿ ಮುಳುಗುತ್ತಿದ್ದ ಹುಡುಗರಿಬ್ಬರ ಪೈಕಿ ಒಬ್ಬನ ಪ್ರಾಣ ಉಳಿಸಲು ಈತ ತನ್ನ ಪ್ರಾಣದ ಹಂಗು ತೊರೆದು ಕಾಲುವೆಗೆ ಹಾರಿ ಸಾಹಸ ಮೆರೆದಿದ್ದಕ್ಕಾಗಿ ಈತನಿಗೆ ಈ ಗೌರವ ಸಂದಿದೆ.

ರಾಷ್ಟ್ರೀಯ ಮಕ್ಕಳ ಕಲ್ಯಾಣ ಮಂಡಳಿ ಎಂಬ ಎನ್‍ಜಿಒ 1957ರಿಂದಲೂ ರಾಷ್ಟ್ರೀಯ ಶೌರ್ಯ ಪುರಸ್ಕಾರಗಳನ್ನು ಪ್ರದಾನ ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಪ್ರಶಸ್ತಿಗೆ 21 ಮಕ್ಕಳನ್ನು ಆಯ್ಕೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ