ಬ್ಯಾಂಕುಗಳಿಗೆ ಸಾಲ ತೀರಿಸಲು ಸಿದ್ದ ಎಂದು ಹೇಳಿದ ಉದ್ಯಮಿ ವಿಜಯ್ ಮಲ್ಯ

ನವದೆಹಲಿ, ಡಿ.5- ದೇಶದ ವಿವಿಧ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ದೇಶ ತೊರೆದಿದ್ದ ಮದ್ಯದ ದೊರೆ ವಿಜಯ್ ಮಲ್ಯ ಸರಣಿ ಟ್ವೀಟ್ ಮಾಡುವ ಮೂಲಕ, ತನ್ನ ಸಾಲದ ಅಸಲನ್ನು ಶೇ.100ರಷ್ಟು ಮರುಪಾವತಿ ಮಾಡುತ್ತೇನೆ ಎಂದಿದ್ದಾರೆ.
ಸರಣಿ ಟ್ವೀಟ್‍ನಲ್ಲಿ ತಮ್ಮ ಏರ್‍ಲೈನ್ಸ್ ನಷ್ಟ ಹೊಂದಿದ ಬಗ್ಗೆ ಮತ್ತು ಮಾಧ್ಯಮಗಳು ತಮ್ಮ ಬಗ್ಗೆ ಪ್ರಸಾರ ಮಾಡುತ್ತಿರುವ ಸುದ್ದಿಗಳು ಸುಳ್ಳು ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನಾನು ಸಾವಿರಾರು ಕೋಟಿ ಹಣ ವಂಚಿಸಿ ದೇಶ ತೊರೆದೆ ಎಂದು ರಾಜಕಾರಣಿಗಳು ಮತ್ತು ಮಾಧ್ಯಮಗಳು ನಿರಂತರವಾಗಿ ಮಾತನಾಡುತ್ತಿದ್ದಾರೆ. ಆದರೆ, ಇವೆಲ್ಲ ಸುಳ್ಳು. ಕರ್ನಾಟಕ ಹೈಕೋರ್ಟ್ ಸಾಲ ಮರುಪಾವತಿ ಮಾಡುವಂತೆ ಸೂಚಿಸುವುದಕ್ಕಿಂತ ಮುಂಚಿನಿಂದಲೂ ನಾನು ಹಣ ಪಾವತಿಸುವುದಾಗಿ ಹೇಳುತ್ತಿದ್ದೇನೆ. ಈ ಕುರಿತು ಏಕೆ ಮಾಧ್ಯಮಗಳು ಏನೂ ಮಾತನಾಡುವುದಿಲ್ಲ ಎಂದು ಮೊದಲ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.
ಇನ್ನೊಂದು ಟ್ವೀಟ್‍ನಲ್ಲಿ, ವಿಮಾನದ ಇಂಧನ ದರ (ಏವಿಯೇಷನ್ ಟರ್ಬೈನ್ ಫುಯೆಲï-ಎಟಿಎಫ್) ಹೆಚ್ಚಾದ ಕಾರಣ ನಮ್ಮ ಏರ್‍ಲೈನ್ಸ್ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವಂತಾಯಿತು. ಕಿಂಗïಫಿರ್ಷ ಅತಿ ಹೆಚ್ಚು ಅಂದರೆ ಬ್ಯಾರೆಲïಗೆ 140 ಡಾಲರ್ ನೀಡಿ ಇಂಧನ ಖರೀದಿಸುವಂತಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಏರ್‍ಲೈನ್ಸ್ ನಷ್ಟ ನೋಡುವಂತಾಯಿತು. ನಾನು ಬ್ಯಾಂಕುಗಳಿಗೆ ಶೇ.100ರಷ್ಟು ಸಾಲದ ಅಸಲನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದೇನೆ. ದಯವಿಟ್ಟೂ ಪಡೆಯಿರಿ ಎಂದಿದ್ದಾರೆ.
ಮತ್ತೊಂದು ಟ್ವೀಟ್‍ನಲ್ಲಿ, ಮಾಧ್ಯಮಗಳು ನನ್ನ ಹಸ್ತಾಂತರ ಬಗ್ಗೆ ಸುದ್ದಿ ಬಿತ್ತರಿಸುತ್ತಿವೆ. ಇದರ ಬಗ್ಗೆ ನಾನು ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ. ಅಲ್ಲದೆ, ನಾನು ಮಾಡಿರುವ ಸಾಲವನ್ನು 2016ರಿಂದಲೂ ಮಾರುಪಾವತಿ ಮಾಡಲು ಸಿದ್ಧವಿದ್ದರೂ ಬ್ಯಾಂಕ್‍ಗಳು ಮತ್ತು ಭಾರತ ಸರ್ಕಾರ ನಿರಾಕರಣೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ