ಡಿಸಿಪಿ ಅಣ್ಣಾಮಲೈ ಮುಂದೆ ಹಾಜರಾದ ನಟ ದುನಿಯಾ ವಿಜಯ್

ಬೆಂಗಳೂರು, ನ.7- ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರ ಮುಂದೆ ನಟ ದುನಿಯಾ ವಿಜಯ್ ಇಂದು ಹಾಜರಾದರು.
ಗಿರಿನಗರ ಠಾಣೆ ಪೆÇಲೀಸರು ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಪತ್ನಿ ಕೀರ್ತಿಗೌಡ ಹಾಗೂ ಇವರ ತಂದೆ-ತಾಯಿಯೊಂದಿಗೆ ದುನಿಯಾ ವಿಜಯ್ ಇಂದು ಬೆಳಗ್ಗೆ ಡಿಸಿಪಿ ಅವರ ಕಚೇರಿಗೆ ತೆರಳಿ ಅಣ್ಣಾಮಲೈ ಎದುರು ಹಾಜರಾದರು.
ಈ ವೇಳೆ ಡಿಸಿಪಿ ಅವರು ದುನಿಯಾ ವಿಜಯ್‍ಗೆ ಯಾವುದೇ ಗಲಾಟೆ ಮಾಡಬಾರದು. ಕಾನೂನಿಗಾಗಲಿ ಹಾಗೂ ಸಾರ್ವಜನಿಕರಿಗಾಗಲಿ ಧಕ್ಕೆ ತರುವಂತಹ ಕೆಲಸ ಮಾಡಬಾರದೆಂದು ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ