ಸುಮಾರು 200 ವರ್ಷಗಳಿಂದಲೂ ಆಂದ್ರ ಪ್ರದೇಶದ ಈ ಹಳ್ಳಿಯಲ್ಲಿ ದೀಪಾವಳಿ ಆಚರಣೆಯಿಲ್ಲ

ಶ್ರೀಕಾಕುಳಂ, ನ.7- ಆಂಧ್ರ ಪ್ರದೇಶದ ರನಸ್ಥಳಂ ಮಂಡಲದ ಫೋನ್ನಾನಾಪಲೇಮ್ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದಲೂ ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿಲ್ಲ.

ನಾಗುಲಾ ಚೌತಿ ದಿನದಂದು ಹಾವು ಕಚ್ಚಿ ಮಗುವೊಂದು ಮೃತಪಟ್ಟಿದ್ದರಿಂದ ಹಾಗೂ ಅದೇ ದಿನ ಎರಡು ಎತ್ತುಗಳು ಕೂಡ ಸಾವನ್ನಪ್ಪಿದ್ದರಿಂದ ಗ್ರಾಮದ ಮುಖ್ಯಸ್ಥರು 200 ವರ್ಷಗಳ ಹಿಂದೆ ದೀಪಾವಳಿ ಹಬ್ಬ ಆಚರಿಸದಂತೆ ನಿರ್ಬಂಧ ಹೇರಿದ್ದು,ಅದು ಈಗಲೂ ಕೂಡಾ ಮುಂದುವರೆದಿದೆ.

ಗ್ರಾಮದ ಹಿರಿಯರು ನೀಡಿದ ತೀರ್ಪಿಗೆ ಗೌರವ ನೀಡುವ ನಿಟ್ಟಿನಲ್ಲಿ ಈ ಗ್ರಾಮದ ಜನರು ದೀಪಾವಳಿ ಆಚರಿಸುತ್ತಿಲ್ಲ. ಹುಡುಗಿ ನೋಡಲು ಈ ಗ್ರಾಮಕ್ಕೆ ಹೆಜ್ಜೆ ಇಡುವ ವರರು ಕೂಡ ದೀಪಾವಳಿ ಮರೆತೆ ಬಿಡಬೇಕು, ಮದುವೆಯಾಗಿ ತನ್ನ ಗಂಡನ ಮನೆ ಸೇರಿದ ಹೆಣ್ಣು ಮಕ್ಕಳು ಅಲ್ಲಿ ದೀಪಾವಳಿ ಆಚರಿಸುತ್ತಾರೆ.

ಸುಶಿಕ್ಷಿತ ಯುವಕರು ಈ ಸಂಪ್ರದಾಯ ಮುರಿಯಲು ಪ್ರಯತ್ನಿಸಿದ್ದರೂ ಗ್ರಾಮದ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ. 12 ವರ್ಷದ ಹುಡುಗಿಯಿಂದಲೂ ನೋಡುತ್ತಿದ್ದೇನೆ ಈ ಗ್ರಾಮದಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂದು 70 ವರ್ಷದ ಪೆÇನ್ನಣ ನಾರಾಯಣಮ್ಮ ಹೇಳುತ್ತಾರೆ.

ಈ ಸಂಪ್ರದಾಯ ಉಲ್ಲಂಘಿಸಿ 12 ವರ್ಷದ ಹಿಂದೆ ದೀಪಾವಳಿ ಆಚರಿಸಿದ ಕೆಲ ವರ್ಷದ ಬಳಿಕ ನನ್ನ ಮಗ ಆಕಸ್ಮಿಕವಾಗಿ ಮೃತಪಟ್ಟಿದ್ದಕ್ಕೆ ದೀಪಾವಳಿ ಹಬ್ಬ ಆಚರಿಸಿದ್ದೇ ಕಾರಣ ಎಂದು ವದಂತಿ ಹರಡಿಸಲಾಯಿತು ಎಂದು ಶಾಲೆಯೊಂದರ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎನ್.ನಾಯ್ಡು ಹೇಳುತ್ತಾರೆ.

ಕಂದಾಯ ಇಲಾಖೆ ಅಧಿಕಾರಿಗಳು, ಪೆÇಲೀಸರ ಮನವೊಲಿಕೆ ಹೊರತಾಗಿಯೂ ಗ್ರಾಮದ ಜನರು ದೀಪಾವಳಿ ಹಾಗೂ ನಾಗುಲಾ ಚೌತಿ ಹಬ್ಬವನ್ನು ತಿರಸ್ಕರಿಸುತ್ತ ಬಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ