ಸನ್ನಡತೆಯ ಆಧಾರದ ಮೇಲೆ 92 ಕೈದಿಗಳಿಗೆಬಿಡುಗಡೆ ಭಾಗ್ಯ

ಸನ್ನಡತೆಯ ಆಧಾರದ ಮೇಲೆ 92 ಕೈದಿಗಳಿಗೆಬಿಡುಗಡೆ ಭಾಗ್ಯ
ಬೆಂಗಳೂರು, ಮಾ.7- ಸನ್ನಡತೆಯ ಆಧಾರದ ಮೇಲೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿದ್ದ 92 ಕೈದಿಗಳಿಗೆ ಇಂದು ಬಿಡುಗಡೆ ಭಾಗ್ಯ ದೊರೆಯಿತು.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 31 ಜೈಲು ಹಕ್ಕಿಗಳನ್ನು ಸನ್ನಡತೆಯ ಆಧಾರದಲ್ಲಿ ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಯಿತು.
ಮೈಸೂರು ಕಾರಾಗೃಹದಿಂದ 16 ಕೈದಿಗಳು, ಕಲಬುರಗಿ 14, ಬಳ್ಳಾರಿ 16, ಬೆಳಗಾವಿ 9, ಬಿಜಾಪುರ 9, ಧಾರವಾಡ ಕಾರಾಗೃಹದಿಂದ 7 ಕೈದಿಗಳು ಸೇರಿದಂತೆ ಒಟ್ಟು 92 ಸನ್ನಡತೆ ಕೈದಿಗಳನ್ನು ಇಂದು ಬಿಡುಗಡೆ ಮಾಡಲಾಯಿತು.
ಪ್ರತಿಬಾರಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಮಾತ್ರ ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸನ್ನಡತೆ ಕೈದಿಗಳನ್ನು ಬೇರೆ ಬೇರೆ ಅವಧಿಯಲ್ಲಿಯೂ ಬಿಡುಗಡೆ ಮಾಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ