ಬಿಸಿಸಿಐ ನೀತಿ ನಿಯಮ ಉಲ್ಲಂಘಿಸಿದ ಕರುಣ್, ಮುರಳಿ ಮೇಲೆ ಕ್ರಮ ?

ನವದೆಹಲಿ: ಆಯ್ಕೆ ಮಂಡಳಿಗೆ ಸಂಹವಾನ ಕೊರತೆ ಹೇಳಿಕೆಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ಓಪನರ್ ಮುರಳಿ ವಿಜಯ್ ಮತ್ತು ಕನ್ನಡಿಗ ಕರುಣ್ ನಾಯರ್ ಅವರನ್ನ ಬಿಸಿಸಿಐ ಪ್ರಶ್ನಿಸಲಿದೆ.
ಆಯ್ಕೆ ವಿಷಯ ಸಂಬಂಧ ಮುರಳಿ ವಿಜಯ್ ಮತ್ತು ಕರುಣ್ ನಾಯರ್ ಅಸಮಾಧಾನ ಹೊರ ಹಾಕಿ ನೀತಿ ನಿಯಮಗಳನ್ನ ಹೊರ ಹಾಕಿದ್ದರು.
ವಿಜಯ್ ಮತ್ತು ಕರುಣ್ ಆಯ್ಕೆ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳಲಿಲ್ಲ. ಇದು ಒಪ್ಪಂದದ ಉಲ್ಲಂಘನೆಯಾಗಿದೆ. ಒಪ್ಪಂದದ ಪ್ರಕಾರ 30 ದಿನದಲ್ಲಿ ಮುಕ್ತಾಯವಾಗುವ ಸರಣಿ ಬಗ್ಗೆ ಯಾವ ಆಟಗಾರ ಕೂಡ ಮಾತನಾಡಬಾರದು. ಅಕ್ಟೋಬರ್ 11ರಂದು ಸಿಒಎ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ