ಮೇಘಾಲಯದಲ್ಲಯೂ ಕಮಲ ಅರಳುವ ಸಾಧ್ಯತೆ, ನಾಳೆಯೇ ಸರ್ಕಾರ ರಚಿಸಲು ಬಿಜೆಪಿ ಭರ್ಜರಿ ಯೋಜನೆ

ಮೇಘಾಲಯ: ಮಾ-4: ಮೇಘಾಲಯದಲ್ಲಯೂ ಕಮಲ ಅರಳುವ ಸಾಧ್ಯತೆ, ನಾಳೆಯೇ ಸರ್ಕಾರ ರಚಿಸಲು ಬಿಜೆಪಿ ಭರ್ಜರಿ ಯೋಜನೆ ಮಾಡುತ್ತಿದೆ.
ಎನ್‍ಪಿಪಿ ಹಾಗೂ ಇತರ ಮೈೀತ್ರಿ ಪಕ್ಷಗಳ ಜೊತೆಯಲ್ಲಿ ಸರ್ಕಾರ ರಚನೆ ಮಾಡಲು ಸರ್ಕಸ್, ಬಿಜೆಪಿ-ಎನ್‍ಪಿಪಿ ಮುಖ್ಯಸ್ಥ ಕನ್ರಾಡ್ ಸಂಗ್ಮಾ ಸಿ.ಎಂ. ಅಭ್ಯರ್ಥಿಯಾಗಿ ಆಯ್ಕೆ, ಕನ್ರಾಡ್ ಸಂಗ್ಮಾ ಮಾಜಿ ಲೋಕಸಭಾ ಸ್ಪೀಕರ್ ಪಿ.ಎ.ಸಂಗ್ಮಾ ಅವರ ಮಗ. ಮೇಘಾಲಯದಲ್ಲಿ ರಾಜಕೀಯ ಅಸ್ಥಿರತೆ ಅಂತ್ಯಗೊಳ್ಳುವ ಸಾಧ್ಯತೆ, ನ್ಯಾಷನಲ್ ಪೀಪಲ್ ಪಾರ್ಟಿ ನೇತೃತ್ವದಲ್ಲಿ ಸರ್ಕಾರ ರಚನೆ, ಮ್ಯೇತ್ರಿ ಕೂಟದಿಂದ ರಾಜ್ಯಪಾಲರಿಗೆ 34 ಶಾಸಕರ ಪಟ್ಟಿ ಸಲ್ಲಿಕೆ, ಮಾರ್ಚ್ 6ರಂದು ಬೆಳಗ್ಗೆ 10.30ಕ್ಕೆ ಕರ್ನಾಡ್ ಸಂಗ್ಮಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ