21 ಜೋಡಿಗೆ ಮರುಮಾಂಗಲ್ಯ ಧಾರಣೆ

ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸಂಖ್ಯಾಶಾಸ್ತ್ರ ಜ್ಯೋತಿಷಿ ಹಾಗೂ ಹನುಮಾನ್ ಆರಾಧಕರಾದ ಡಾ.ವಿಪ್ರವ್ ಸಾರ್ಥಿಕ್ ಗುರೂಜಿ ನೇತೃತ್ವದಲ್ಲಿ ಪಡುವಾರಹಳ್ಳಿಯಲ್ಲಿರುವ ಮಲೆಮಹದೇಶ್ವರ ದೇವಸ್ಥಾನದಲ್ಲಿ 21 ಜೋಡಿಗೆ ಮರುಮಾಂಗಲ್ಯ ಧಾರಣೆ ಕಾರ‌್ಯಕ್ರಮವನ್ನು ನಡೆಸಲಾಯಿತು.

ವಿವಾಹದ ಬಳಿಕ ಎದುರಾಗಿರುವ ಅಡತಡೆಗಳು, ಸಂತಾನ ಭಾಗ್ಯ, ಸಾಮಾರಸ್ಯ ದೋಷ ಪರಿಹಾರಕ್ಕಾಗಿ ಆಯೋಜಿಸಲಾಗಿದ್ದ ಮರುಮಾಂಗಲ್ಯ ಧಾರಣೆ ಕಾರ‌್ಯಕ್ರಮ * ಡಾ.ವಿಪ್ರವ್ ಸಾರ್ಥಿಕ್ ಗುರೂಜಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಮರುಮಾಂಗಲ್ಯ ಧಾರಣೆಯ ಬಳಿಕ ಗಿರಿಜಾ ಕಲ್ಯಾಣೋತ್ಸವ ಹಾಗೂ ಹೋಮವನ್ನು ನಡೆಸಲಾಯಿತು.

ಮಲೆಮಹದೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮೆಲ್ಲಹಳ್ಳಿ ಮಹದೇವಸ್ವಾಮಿ ಟ್ರಸ್ಟ್‌ನ ಕಾರ‌್ಯದರ್ಶಿ ಎಂ.ಭೈರಪ್ಪ, ಉಪಾಧ್ಯಕ್ಷ ರಾಮಣ್ಣ, ಪುರೋಹಿತರಾದ ನಾಗಾರಾಜಶರ್ಮ, ಪ್ರಧಾನ ಅರ್ಚಕರಾದ ಮಂಜುನಾಥ ಶರ್ಮಾ ಹಾಗು ರವಿ ವಾಜ, ಇವರ ಸಮ್ಮುಖದಲ್ಲಿ ಕಾರ್ಯಕ್ರಮ ತುಂಬಾ ಚೆನ್ನಾಗಿ ನೆರವೇರಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ