ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಎಂ.ಎಸ್ ಆಯ್ಕೆ

Varta Mitra News

ಬೆಂಗಳೂರು,ಸೆ.10-ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಎಂ.ಎಸ್. ಅವರು ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಲಕ್ಷ್ಮೀ ನಾರಾಯಣ ಎಸ್, ಖಜಾಂಜಿಯಾಗಿ ಯತಿರಾಜು ಆಯ್ಕೆಯಾಗಿದ್ದಾರೆ.

ರಾಘವೇಂದ್ರ ಕೆ, ಶಿವಕುಮಾರ್ ಬೆಳ್ಳಿತಟ್ಟೆ, ಸುರೇಶ್ ಎ.ಎಂ., ಶಿವಣ್ಣ, ಸಚ್ಚಿದಾನಂದ ಕುರಗುಂದ, ಮೋಹನ್ ಕುಮಾರ್ ಬಿ.ಎನ್., ಅನಿತಾ ಎಚ್., ಮುಂಜಾನೆ ಸತ್ಯ, ಸುಮನಾ ಲಕ್ಷ್ಮೀಶ ಮತ್ತು ವನಿತಾ ಎನ್. ಅವರು ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾರೆ

ಸಂಘದ 13 ನಿರ್ದೇಶಕರ ಸ್ಥಾನಕ್ಕೆ ಸೆ.2ರಂದು ಚುನಾವಣೆ ನಡೆದಿತ್ತು. ಅದರಲ್ಲಿ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಏಳು ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ರಾಘವೇಂದ್ರ, ಶಿವಕುಮಾರ್ ಬೆಳ್ಳಿತಟ್ಟೆ, ಎ.ಎಂ.ಸುರೇಶ್, ಯತಿರಾಜು, ಶಿವಣ್ಣ, ಸಚ್ಚಿದಾನಂದ್, ಮೋಹನ್ ಕುಮಾರ್ ಅವರು ಗೆಲುವು ಸಾಧಿಸಿದ್ದರು.
ಇಂದು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಖಜಾಂಜಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ