ಕೌಟುಂಬಿಕ ಕಲಹದ ಹಿನ್ನೆಲೆ, ಮಹಿಳೆಯರ ಕೊಲೆ

ಚಿತ್ರದುರ್ಗ, ಜೂ.27- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರನ್ನು ಗಂಡಂದಿರು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಳ್ಳಕೆರೆ: ಕೌಟುಂಬಿಕ ಕಲಹದ ಹಿನ್ನೆ¯ಯಲ್ಲಿ ತಾಲೂಕಿನ ವಲಸೆ ಗ್ರಾಮದ ನಿವಾಸಿ ಪರಮೇಶ್ವರಪ್ಪ ಎಂಬುವವನು ಪತ್ನಿ ಪುಟ್ಟಮ್ಮ (60)ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ ಎಂದು ಪೆÇಲೀಸರು ತಿಳಿಸಿದ್ದು, ಈ ಸಂಬಂಧ ತಾಲೂಕು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ತುರುವನೂರು: ಚಿತ್ರದುರ್ಗ ತಾಲೂಕಿನ ಬಬ್ಬಲರಂಗವ್ವನಹಳ್ಳಿ ಗ್ರಾಮದ ನಿವಾಸಿ ಶ್ರೀಧರ ಎಂಬುವವನು ಪತ್ನಿ ಸಾಕಮ್ಮ (26) ರಾತ್ರಿ ಮಲಗಿದ್ದಾಗ ಆPಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾನೆ.
ಶ್ರೀಧರನಿಗೆ ಕುಡಿತದ ಚಟವಿದ್ದು, ಕುಡಿದು ಬಂದು ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಶ್ರೀಧರ ಪರಾರಿಯಾಗಿದ್ದು, ಈ ಸಂಬಂಧ ತುರುವನೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ