ಮೊಬೈಲ್​​ ಖರೀದಿಸಿದರೆ 1 ಕೆ.ಜಿ ಈರುಳ್ಳಿ ಉಚಿತ; ತಮಿಳುನಾಡು ಮೊಬೈಲ್​ ಮಳಿಗೆಯಲ್ಲಿ ಹೀಗೊಂದು ಆಫರ್​

ಹೊಸದಿಲ್ಲಿ: ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರು ದರ ಏರಿಕೆಯಿಂದಾಗಿ ಈರುಳ್ಳಿ ಕೊಂಡು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಮಿಳುನಾಡಿನ ಮೊಬೈಲ್ಮಾರಾಟಗಾರರೊಬ್ಬರು ಇದನ್ನೇ ನೆಪವಾಗಿಟ್ಟುಕೊಂಡು ಗ್ರಾಹಕರಿಗೆ ಈರುಳ್ಳಿ ಆಫರ್ಬಿಟ್ಟಿದ್ದಾರೆ.

ತಾಂಜವೂರು ಜಿಲ್ಲೆಯ ಪಟ್ಟುಕೊಟ್ಟೈ ತಲಯಾರಿ ಸ್ಟ್ರೀಟ್​​ನಲ್ಲಿರುವ ಎಸ್​ಟಿಆರ್​ ಮೊಬೈಲ್​ ಮಾರಾಟ ಮಳಿಗೆಯ ಮಾಲೀಕ, ತಮ್ಮ ಅಂಗಡಿಯಲ್ಲಿ ಮೊಬೈಲ್​ ಕೊಂಡರೆ 1 ಕೆ.ಜಿ ಈರುಳ್ಳಿ ಉಚಿತವಾಗಿ ನೀಡುವುದಾಗಿ ಆಫರ್​ ನೀಡಿದ್ದಾರೆ. ಈ ಆಫರ್​ ಗಮನಿಸಿದ ಗ್ರಾಹಕರು ಮೊಬೈಲ್​ ಜೊತೆಗೆ ನೀರುಳ್ಳಿ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್​ಟಿಆರ್​ ಮೊಬೈಲ್​ ಅಂಗಡಿ ಮಾಲೀಕ ಸರವಣ ಕುಮಾರ್​ ‘ಪಟ್ಟುಕೊಟ್ಟೈನಲ್ಲಿ  ಇಂತಹ ಆಫರ್​ ಯಾರು ಹೊರಡಿಸಿಲ್ಲ. ಈ ಆಫರ್​ ಹೊರಡಿಸಿರುವುದರಿಂದ ನನ್ನ ಅಂಗಡಿಗೆ ಬರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ‘ ಎಂದಿದ್ದಾರೆ.

35 ವರ್ಷದ ಸರವಣ ಕುಮಾರ್​ 8 ವರ್ಷಗಳಿಂದ ಮೊಬೈಲ್​ ಅಂಗಡಿ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಅಥವಾ ಎರಡು ಮೊಬೈಲ್​ಗಳು ಸೇಲ್​ ಆಗುತ್ತಿದ್ದವು. ಆದರೆ ಮೊಬೈಲ್​ ಖರೀದಿಸಿದರೆ 1 ಕೆ.ಜಿ ಈರುಳ್ಳಿ ಉಚಿತ ಪಡೆಯಿರಿ ಎಂಬ ಆಫರ್​ನಿಂದಾಗಿ ವ್ಯಾಪಾರದಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂದು ಹೇಳುತ್ತಾರೆ.

ಇನ್ನು ಮಹಿಳೆಯರಂತೂ ಈರುಳ್ಳಿ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾದು ಕುಳಿತ್ತಿದ್ದಾರೆ. ದೇಶದ ಮೆಟ್ರೋ ಸಿಟಿಗಳಾದ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್​, ಪುಣೆ ಮತ್ತು ಅಹಮದಾಬಾದ್​ಗಳಲ್ಲಿ ಈರುಳ್ಳಿ ಬೆಲೆ 150ರ ಗಡಿ ದಾಟಿದೆ.  ತಮಿಲುನಾಡಿನಲ್ಲಿ ಈರುಳ್ಳಿ ಬೆಲೆ 140 ರಿಂದ 160 ರೂ. ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ