ನೆರೆ ಸಂತ್ರಸ್ತರ ವಿಚಾರದಲ್ಲಿ ಮುಖ್ಯಮಂತ್ರಿಯವರಿಂದ ಉಡಾಫೆ ಮಾತು- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಅ.16- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆ ಸಂತ್ರಸ್ತರ ವಿಚಾರದಲ್ಲಿ ಉಡಾಫೆ ಮಾತುಗಳಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದೊಂದಿಗೆ ಚೆಲ್ಲಾಟವಾಡಿದ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ವಹಿಸಿ ಅವರ ನೆರವಿಗೆ ಧಾವಿಸಬೇಕು ಆದರೆ ಈ ರೀತಿ ಹೇಳಿಕೆ ಸರಿಯಲ್ಲ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಹೃದಯ ವೈಶಾಲ್ಯತೆ ತೋರಿರಲಿಲ್ಲ. ಸಾಲ ಮನ್ನಾ ಮಾಡೋರು, ನೆರೆ ಹಾವಳಿಗೆ ಹಣ ಹೊಂದಿಸೋಕು ಸಂಬಂಧವಿಲ್ಲ ಎಂದರು.
ನಾವು ಮಾಡಿದ ರೈತರ ಸಾಲ ಮನ್ನಾ ಯೋಜನೆ ರೈತರಿಗೆ ತಲುಪದೆ ರೈತರ ಆತ್ಮಹತ್ಯೆ ಸಾಲ ಮನ್ನಾ ಯೋಜನೆ ಬಳಿಕ ಕಡಿಮೆಯಾಗಿತ್ತು ಎಂದು ಹೇಳಿದರು.
ಯಡಿಯೂರಪ್ಪ ಅವರು ಸಾಕಷ್ಟು ಅನುಭವವಿದ್ದರೂ ಬೇಜವಾಬ್ದಾರಿ ಉತ್ತರ ಕೊಡುವುದು ಸರಿಯಲ್ಲ. ರಾಜ್ಯದ ಜನತೆ ಕಷ್ಟದಲ್ಲಿದ್ದಾರೆ. ರೈತರು ಹಾಗೂ ನೆರೆ ಸಂತ್ರಸ್ತರ ಬಗ್ಗೆ ಈ ರೀತಿ ಹೇಳಿಕೆ ಸಲ್ಲದು.
ಯಾವುದೇ ರೀತಿ ಹಣದ ಸಮಸ್ಯೆ ಇಲ್ಲ. ಮಹಾರಾಷ್ಟ್ರಕ್ಕೆ ಮತ ಕೇಳಲು ಹೋಗಿರುವ ಬಗ್ಗೆ ಬೆಳಗಾವಿ ಭಾಗದ ಜನ ನಿರ್ಧಾರ ಮಾಡಬೇಕಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ