ಜಿ.ನಾರಾಯಣಕುಮಾರ್ ಧೀಮಂತ ನಾಯಕರಾಗಿದ್ದರು-ಮೇಯರ್ ಗಂಗಾಂಬಿಕೆ

ಬೆಂಗಳೂರು, ಆ.2- ಕನ್ನಡ ಪರ ಚಳವಳಿಗಳಲ್ಲಿ ಜಿ.ನಾರಾಯಣಕುಮಾರ್ ಅವರು ಪಾಲ್ಗೊಂಡು ಇತರರಿಗೆ ಸ್ಫೂರ್ತಿಯಾಗಿದ್ದರು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ನಗರದ ಬಿನ್ನಿಮಿಲ್ ವೃತ್ತದಿಂದ ಮಾಗಡಿ ರಸ್ತೆ ಟೋಲ್‍ಗೇಟ್ ಸಿಗ್ನಲ್ ವರೆಗಿನ ರಸ್ತೆಗೆ ಜಿ.ನಾರಾಯಣಕುಮಾರ್ ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿ.ನಾರಾಯಣಕುಮಾರ್ ಧೀಮಂತ ನಾಯಕರಾಗಿದ್ದರು, ಬಡಜನರ ದನಿಯಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಬಿಎಂಪಿಯಲ್ಲಿ ಜಿ.ನಾರಾಯಣಕುಮಾರ್ ಅವರು ಮೊದಲು ವಿಜೃಂಭಣೆಯಿಂದ ಆಚರಿಸಿದವರು, ಕಾರ್ಮಿಕ ಮುಖಂಡರಾಗಿ ಅವಿರತ ಸೇವೆ ಸಲ್ಲಿಸಿದವರು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಜಿ.ನಾರಾಯಣಕುಮಾರ್ ಅವರು, ಕನ್ನಡ ಪರ ಹೋರಾಟಗಾರರಾಗಿದ್ದರು, ನಾಡು, ನುಡಿ, ಜಲಕ್ಕಾಗಿ ಶ್ರಮಿಸಿದ್ದರು. ನಾವೆಲ್ಲರೂ ಕನ್ನಡ ಭಾಷೆ, ಸಂಸ್ಕøತಿ, ಸಾಹಿತ್ಯ ಉಳಿಸಲು ಮುಂದಾಗೋಣ ಎಂದು ಕರೆ ನೀಡಿದರು.

ಉಪಮೇಯರ್ ಭದ್ರೇಗೌಡ ಮಾತನಾಡಿ, ಜಿ.ನಾರಾಯಣಕುಮಾರ್ ಅವರ ಹೆಸರನ್ನು ಶಾಶ್ವತವಾಗಿರಿಸಲು ಬಿನ್ನಿಮಿಲ್ ವೃತ್ತದಿಂದ ಮಾಗಡಿ ರಸ್ತೆ, ಟೋಲ್‍ಗೇಟ್ ಸಿಗ್ನಲ್‍ವರೆಗಿನ ರಸ್ತೆಗೆ ಅವರ ಹೆಸರು ನಾಮಕರಣ ಮಾಡಿರುವುದು ಸಂತಸದ ವಿಚಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಹಾಗೂ ಅಧಿಕಾರಿಗಳು, ಪಾಲಿಕೆ ಸದಸ್ಯರು ಮತ್ತಿತರರ ಗಣ್ಯರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ