ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣ-ಆರೋಪಿ ಬಿಜೆಪಿ ಶಾಸಕ ಪಕ್ಷದಿಂದ ಉಚ್ಛಾಟನೆ

ನವದೆಹಲಿ, ಆ.1– ಉನ್ನಾವೋ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಅವರನ್ನು ಇಂದು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಉನ್ನಾವೋ ಸಂತ್ರಸ್ತ ಬಾಲಕಿಯನ್ನು ಅಪಘಾತದಲ್ಲಿ ತೀವ್ರ ಗಾಯಗೊಳಿಸಿ ಇಬ್ಬರ ಸಾವಿಗೆ ಕುಲದೀಪ್ ಕಾರಣ ಎಂಬ ಆರೋಪಗಳ ಬೆನ್ನಲ್ಲೆ ಬಿಜೆಪಿ ವರಿಷ್ಠರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಉನ್ನಾವೋ ಅತ್ಯಾಚಾರ ಪ್ರಕರಣ ಮತ್ತು ನಂತರ ನಡೆದ ಸಂತ್ರಸ್ತೆ ಕಾರು ಅಪಘಾತ ಪ್ರಕರಣಗಳು ಸಂಸತ್ತನಲ್ಲೂ ಭಾರೀ ಪ್ರತಿಭಟನೆ, ಧರಣಿಗೆ ಕಾರಣವಾಗಿತ್ತು.

ಇದರಿಂದ ಬಿಜೆಪಿಗೆ ಇರಿಸು-ಮುರಿಸು ಉಂಟಾಗಿತ್ತು. ಕೇಂದ್ರ ವರಿಷ್ಠದ ಆದೇಶದ ಮೇರೆಗೆ ಶಾಸಕ ಕುಲದೀಪ್ ಸಿಂಗ್ ಸೆನೆಗರ್‍ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ