ಪ್ರಾಮಾಣಿಕತೆ ಮೆರೆದ ಟ್ಯಾಕ್ಸಿಚಾಲಕ

ಶ್ರೀನಗರ,ಜೂ.25- ಪ್ರಯಾಣಿಕರೊಬ್ಬರು ಮರೆತು ಟ್ಯಾಕ್ಸಿಯಲ್ಲೇ ಬಿಟ್ಟು ಹೋಗಿದ್ದ 10 ಲಕ್ಷ ನಗದುವುಳ್ಳ ಬ್ಯಾಗ್‍ನ್ನು ಅವರಿಗೆ ತಲುಪಿಸಿ ಕಾಶ್ಮೀರದ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾರೆ.

ಸೋಪಿಯಾನ್ ಜಿಲ್ಲೆಯ ನಿವಾಸಿ ತರಿಖ್ ಅಹಮ್ಮದ್ ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ಬಂದಿದ್ದ ಕುಟುಂಬವೊಂದು ಇವರ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಿತ್ತು.

ಈ ವೇಳೆ ಅವರು 10 ಲಕ್ಷ ನಗದು ಇದ್ದ ತಮ್ಮ ಬ್ಯಾಗ್‍ನ್ನು ಟ್ಯಾಕ್ಸಿಯಲ್ಲಿ ಬಿಟ್ಟು ಹೋಗಿದ್ದರು. ಕಳೆದ ನಾಲ್ಕು ದಿನಗಳಿಂದ ಈ ಕುಟುಂಬವನ್ನು ಹುಡುಕಾಡಿದ ತರೀಖ್ ಕೊನೆಗೂ ಅವರ ಬ್ಯಾಗ್‍ನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾನೆ.

10 ಲಕ್ಷ ನಗದು, ಚಿನ್ನ ಹಾಗೂ ಸ್ಮಾರ್ಟ್ ಫೋನ್ಗಳಿದ್ದ ಬ್ಯಾಗ್‍ನ್ನು ಹಿಂದಿರುಗಿಸಿದ ಚಾಲಕನ ಮಾನವೀಯತೆ ಹಾಗೂ ಪ್ರಾಮಾಣಿಕತೆಗೆ ಪ್ರವಾಸಿ ಕುಟುಂಬ ಅಭಿನಂದನೆ ಸಲ್ಲಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ