ಸಾಮಾನ್ಯ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ ಸುರೇಶ್ ಅಂಗಡಿ

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸುರೇಶ್​ ಅಂಗಡಿ, ರಾಣಿ ಚೆನ್ನಮ್ಮ ರೈಲಿನ ಸಾಮಾನ್ಯ ದರ್ಜೆ ಬೋಗಿಯಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.

ಸೋಮವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರು ತಲುಪಿದರು. ಅತಿಗಣ್ಯರು ಪ್ರಯಾಣಿಸುವ ಕೋಚ್​ಗಳು ಮಾತ್ರ ಸ್ವಚ್ಛವಾಗಿರುತ್ತವೆ. ಜನಸಾಮಾನ್ಯರು ಪ್ರಯಾಣಿಸುವ ಬೋಗಿಗಳು ಮತ್ತು ಶೌಚಗೃಹಗಳು ಸ್ವಚ್ಛವಾಗಿಲ್ಲ ಎಂದು ಸಚಿವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್​ ಅಂಗಡಿ, ಎಲ್ಲ ರೈಲು ಪ್ರಯಾಣಿಕರನ್ನು ಇಲಾಖೆ ಸಮಾನವಾಗಿ ಕಾಣುತ್ತದೆ. ಸಾಮಾನ್ಯ ದರ್ಜೆ ಬೋಗಿಗಳಲ್ಲಿನ ಸಮಸ್ಯೆಗಳನ್ನು ಕೂಡಲೇ ಸಮರ್ಪಕವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ