ಸಚಿವ ಸ್ಥಾನ ಬಿಟ್ಟುಕೊಡಿ ಎಂದರೂ ಯಾವುದೇ ಅಸಮಾಧಾನವಿಲ್ಲ ಎಂದ ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು: ನಾನು ಸಚಿವನಾಗಿದ್ದು, ಮೂರು ತಿಂಗಳೋ ಮೂರು ದಿನವೋ. ಸಚಿವ ಆಗಬೇಕಿತ್ತು ಆಗಿದಿದ್ದೇನೆ. ಮುಂದುವರಿಸಿದರೆ ಸಂತೋಷ, ಬಿಟ್ಟು ಕೊಡಿ ಎಂದರೂ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟ ಪಡಿಸಿದ್ದಾರೆ.

ನನಗೆ ಸಚಿವ ಸ್ಥಾನ ಸಿಗದೇ ಇದ್ದ ವೇಳೆ ಅಸಮಾಧಾನ ಇದ್ದದ್ದು ನಿಜ. ಇಂದಿನ ಸಭೆಯಲ್ಲಿ ಸಚಿವರು ಸ್ಥಾನ ಬಿಟ್ಟು ಕೊಡುವ ಬಗ್ಗೆ ಚರ್ಚೆ ಮಾಡಬಹುದು. ಸಚಿವ ಸ್ಥಾನ ತ್ಯಾಗ ಮಾಡಲು ಹೇಳಿದರೆ ಅದಕ್ಕೆ ಸಿದ್ಧವಾಗಿರಬೇಕಾಗುತ್ತದೆ. ಹೈಕಮಾಂಡ್ ಆದೇಶಕ್ಕೆ ಯಾವಾಗಲು ಬದ್ಧ ಎಂದು ಹೇಳಿದರು.

ಬೆಂಗಳೂರಿನ ಉಪಮುಖ್ಯಮಂತ್ರಿ ಪರಮೇಶ್ವರ್​ ಅವರ ನಿವಾಸದಲ್ಲಿ ಶಾಸಕರ ಮನವೊಲಿಕೆಗಾಗಿ ಏರ್ಪಡಿಸಲಾಗಿರುವ ಸಭೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಕ್ಕ ಬಳಿಕ ನಾನು ಸಂತೋಷದಿಂದ ಇದ್ದೇನೆ. ಸಚಿವ ಸ್ಥಾನ ಸಿಗದೇ ಇದ್ದಾಗ ನನಗೆ ಅಸಮಾಧಾನ ಇದಿದ್ದು ನಿಜ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದರು.

ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಿಂದ ಬೇಗ ಹೋಗಿರುವುದು ನಿಜ. ಖಾಸಗಿ ಕಾರ್ಯಕ್ರಮ ಇದ್ದುದರಿಂದ ಬೇಗ ಹೋಗಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ