ಜನಾದೇಶಕ್ಕೆ ತಲೆಬಾಗುವೆ ಎಂದ ಕಾಂಗ್ರೆಸ್ ನಾಯಕ ಉಗ್ರಪ್ಪ

ಬಳ್ಳಾರಿ: ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಜನಾದೇಶಕ್ಕೆ ತಲೆಬಾಗುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಜನಾದೇಶಕ್ಕೆ ತಲೆಬಾಗುತ್ತೇನೆ. ನನ್ನ ವಿರುದ್ಧ ಬಂದ ಫಲಿತಾಂಶ ಒಪ್ಪುತ್ತೇನೆ. ಜನ ಮೆಚ್ಚುವಂತೆ ಕೆಲಸ ಮಾಡಿದ್ದೇನೆ. ರಾಜ್ಯ ಹಾಗೂ ದೇಶದಲ್ಲಿನ ಫಲಿತಾಂಶ ನೋಡಿದರೆ ಮೋದಿ ಅಲೆ ಕೆಲಸ ಮಾಡಿದೆ ಎಂದು ಅನ್ನಿಸುತ್ತದೆ. ನನ್ನ ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ ಎಂದರು.

ನಮ್ಮ ಕಾರ್ಯಕರ್ತರಿಗೆ ಧನ್ಯವಾದಗಳು. ಹಂಪಿ ‌ಉತ್ಸವ, ತುಂಗಭದ್ರಾ ಜಲಾಶಯ ಹೂಳು ಎತ್ತುವ ಪ್ಲ್ಯಾನ್‌ ಮಾಡಿದೆ. ಜನರಿಗೆ ಇದು ಇಷ್ಟ ಆಯ್ತೋ ಇಲ್ಲವೋ ಗೊತ್ತಾಗಲಿಲ್ಲ. ನನಗಿಂತ ಬಿಜೆಪಿ ಹೆಚ್ಚು‌ ಕೆಲಸ‌ ಮಾಡಬಹುದೇನೋ. ಸೋತಾಗ‌ ಕೊಂಕು‌ ನುಡಿಯಾಡುವುದಿಲ್ಲ. ಪಕ್ಷ ತಾಯಿ ಇದ್ದಂತೆ ಯಾರು ಕೂಡ ‌ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದರು.

lok sabh election,v s ugrappa,bellary

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ