ಖಂಡ್ರೆ ಸುನಾಮಿ ಎದುರು ಖೂಬಾ ಧೂಳಿಪಟ ಪಕ್ಕಾ : ವಿಜಯಕುಮಾರ ಕೌಡ್ಯಾಳ

ಬೀದರ್: ಜಿಲ್ಲೆಯಲ್ಲಿ ಈಶ್ವರ ಖಂಡ್ರೆ ಮಹಾ ಶಕ್ತಿ ಇದ್ದಂತೆ. ಅವರ ಸುನಾಮಿ ಎದರು ಈ ಬಾರಿ ಬಿಜೆಪಿ ಅಭ್ಯರ್ಥಿ ಧೂಳಿಪಟ ಆಗಲಿದ್ದಾರೆ ಎಂದು ಯುವ ಮುಖಂಡ, ಕಳೆದ ವಿಧಾನಸಭಾ ಚುನಾವಣೆಯ ಔರಾದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ ಹೇಳಿದರು.


ಔರಾದ್ ತಾಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಮನೆ, ಮನೆಗೆ ತೆರಳಿ ಪ್ರಚಾತ ನಡೆಸಿ ಮಾತನಾಡಿ, ಕೇವಲ‌ ಮೋದಿ ಗಾಳಿಗೆ ಖೂಬಾ ಮೆಚ್ಚಿಕೊಂಡಿದ್ದಾರೆ. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಅಜೆಂಟಾ ಇಟ್ಟುಕೊಂಡಿರು ಈಶ್ವರ ಖಂಡ್ರೆ ಒಂದು ರೀತಿ ಸುನಾಮಿ ಇದ್ದಂತೆ. ಇವರ ಎದರು ಎಂಥ ಗಾಳಿ ಸಹ ಕೊಚ್ಚಿಕೊಂಡು ಹೋಗಲಿದೆ ಎಂದರು.


ಬಿಜೆಪಿ ಯವರ ಬಾಯಿಯಲ್ಲಿ ಕೇವಲ ಮೋದಿ ಎಂಬ ಎರಡು ಅಕ್ಷರ ಗಳು ಮಾತ್ರ. ಇವರು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಕೋಮುವಾದಿಗಳಿಗೆ ಯಾವುದೇ ಕಾರಣಕ್ಕಾಗಿ ಮತ ನೀಡಬೇಡಿ. ಎಲ್ಲರ ಹಿತ ಕಾಪಾಡುವ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಚುನಾವಣೆ ಯಲ್ಲಿ ಈಶ್ವರ ಖಂಡ್ರೆ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ತೀವ್ರ ಮುಖಭಂಗಬಾಗಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ