ಒಂಟಿ ಸಲಗದ ರೌದ್ರಾವತಾರಕ್ಕೆ ಐವರ ಬಲಿ

ತಲ್ಚೇರ್(ಒಡಿಶಾ),ಏ.19- ಒಂಟಿ ಸಲಗದ ರೌದ್ರಾವತಾರಕ್ಕೆ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಐವರು ಗ್ರಾಮಸ್ಥರು ಬಲಿಯಾಗಿರುವ ದುರ್ಘಟನೆ ಒಡಿಶಾದ ಅಂಕುಲ್ ಜಿಲ್ಲೆಯಲ್ಲಿ ಸಂಭವಿಸಿದೆ.

ಅರಣ್ಯದಂಚಿನಲ್ಲಿರುವ ಸಂದಾ ಗ್ರಾಮಕ್ಕೆ ರಾತ್ರಿ ನುಗ್ಗಿದ ಕೋಪೋದ್ರಿಕ್ತ ಕಾಡಾನೆ ಮನೆಯೊಂದರ ವರೆಂಡಾದಲ್ಲಿ ಮಲಗಿದ್ದ ವ್ಯಕ್ತಿ ಮತ್ತು ಆತನ ಇಬ್ಬರು ಹೆಣ್ಣು ಮಕ್ಕಳನ್ನು ತುಳಿದು ಕೊಂದು ಹಾಕಿತು.

ನಂತರ ಇನ್ನೊಂದು ಮನೆಗೆ ನುಗ್ಗಿದ ಸಲಗ ಮಹಿಳೆಯೊಬ್ಬರು ಬಲಿತೆಗೆದುಕೊಂಡಿತು.

ಮತ್ತೆ ಅಲ್ಲಿಂದ ಪಕ್ಕದ ಗ್ರಾಮ ಸಂತಪಾಡಕ್ಕೆ ನುಗ್ಗಿದ ಆನೆ 70 ವರ್ಷದ ವೃದ್ಧನೊಬ್ಬನನ್ನು ಸೊಂಡಲಿನಿಂದ ಎತ್ತಿಹಾಕಿ ಕಾಲಿನಿಂದ ತುಳಿದು ಸಾಯಿಸಿದೆ.

ಈ ಘಟನೆಯಿಂದ ಈ ಎರಡೂ ಗ್ರಾಮಗಳ ಜನರು ಭಯಭೀತರಾಗಿದ್ದು, ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ತಮಗೆ ಸೂಕ್ತ ರಕ್ಷಣೆ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ