ಪಕ್ಷೇತರ ಅಭ್ಯರ್ಥಿ ಮೌಲಪ್ಪ ಮಾಳಗೆ ಬಿರುಸಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಮೌಲಪ್ಪ ಮಾಳಗೆ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.

ತಾದಲಾಪುರ, ಶಾಪುರ ಇತರೆಡೆ ಪ್ರಚಾರ ನಡೆಸಿದ ಮೌಲಪ್ಪ ಮಾಳಗೆ, ಅಂಗವಿಕಲನಾದ ನನಗೂ ಒಂದ ಬಾರಿ ಅವಕಾಶ ನೀಡಿ. ರಾಷ್ಟ್ರೀಯ ಪಕ್ಷಗಳು ಕ್ಷೇತ್ರವನ್ನು ಕಡೆಗಣಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ನಾನು ಚುನಾವಣೆ ಕಣಕ್ಕೆ ಇಳಿದಿರುವೆ. ಟ್ರ್ಯಾಕ್ಟರ್ ಚಿಹ್ನೆ ಹೊಂದಿರುವ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಂಗವೈಕಲ್ಯ ಆದರು ಸಹ ನಾನು ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಯಶಸ್ವಿ ಯಾಗಿರುವೆ. ಅದೇ ರೀತಿ ರಾಜಕೀಯ ರಂಗದಲ್ಲಿ ಸಾಧನೆ ಮಾಡಲು ಅಂಗವಿಕಲನಾದ ನನಗೆ ಒಂದು ಬಾರಿ ಅವಕಾಶ ನೀಡಿ ಎಂದು ಹೇಳಿದರು.

ರಾಜ್ಯದಲ್ಲಿ ಬೀದರ್ ಹಿಂದುಳಿದ ಕ್ಷೇತ್ರ. ನೀರಾವರಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನನಗೆ ಮತ ನೀಡುವ ಮೂಲಕ ಸಂಸತ್ ನಲ್ಲಿ ಬೀದರ್ ಧ್ವನಿ ಮೊಳಗಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಮುಖರು ಧನರಾಜ, ಗೋಪಾಲ, ದೇವದಾಸ, ಗಣೇಶ, ಸುನೀಲ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ