ಚಿಂಚೋಳಿಯಲ್ಲಿ ಡಾ.ಗೀತಾ ಖಂಡ್ರೆಗೆ ಅದ್ದೂರಿ ಸ್ವಾಗತ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಡದ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ. ಗೀತಾ ಖಂಡ್ರೆ ಚಿಂಚೋಳಿಯಲ್ಲಿ ಪ್ರಚಾರ ನಡೆಸಿದರು.
ಕಾಂಗ್ರೆಸ್ ನ ನೂರಾರು ಮುಖಂಡು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು. ಸ್ಥಳೀಯರಿಂದ ಡಾ.ಗೀತಾ ಖಂಡ್ರೆಗೆ ಅದ್ದೂರಿ ಸ್ವಾಗತ‌ ದೊರೆಯಿತು.

ಡಾ.ಉಮೇಶ ಜಾಧವ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನೀಡಿತು. ಆದರೆ ಪಕ್ಷಕ್ಕೆ ದ್ರೋಹ ಬಗೆದು ಹೋದರು. ಬೀದರ್, ಕಲಬುರಗಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.

ಕ್ಷೇತ್ರದ ಸಮಗ್ರ ವಿಜನ್ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುಸುವ ಮೂಲಕ ದಿಲ್ಲಿಗೆ ಕಳುಹಿಸಿ, ಅವಕಾಶ ಕೊಟ್ಟರು ಕೆಲಸ ಮಾಡದ ಭಗವಂತ ಖೂಬಾ ಗೆ ಮನೆಗೆ ಕಳುಹಿಸಿ ಎಂದು ಹೇಳಿದರು.

 

ಮಾತಿನಲ್ಲಿ ಮನೆ ಕಟ್ಟುವ ಬಿಜೆಪಿಗೆ ಈ ಬಾರಿ ಜನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಭಾರಿ ಬಹುಮತದಿಂದ ಆರಿಸಿ ಬರಲುದ್ದಾರೆ ಎಂದು ಹೇಳಿದರು.


ಪ್ರಮುಖರಾದ ಶಿವಶರಣ್ಣಪಾ ಚಿಟಾ,ಶಿವನಂದ ಪಾಟೀಲ್,ಸಂಜೂಕುಮಾರ್ ರೇಖಾ ವಿಲಾಸ್ ಪಾಟೀಲ್, ಡಾ ವಿಜಯ್ ಲಕ್ಮಿ ಗುದ್ಗೆ ,ಶೀತಲ್ ಚವನ್, ಪಪ್ಪು ಪಾಟೀಲ್ ಖಾನಾಪುರ್, ಸಂಗಮೇಶ ವಲೇ,ಕಪಿಲ್ ಕಲ್ಯಾಣಿ,ಸಂಗಮೇಶ ಹುಣ್ಣುಜೆ,ಸಂತೋಷ್ ಹುಣ್ಣಜೆ, ಶಿವಕುಮಾರ ರಾಜಭವನ್,ಆನಂದ್ ಬಿರಾದಾರ್,ಲೋಕೇಶ್ ಭುರೇ, ಗಿರೀಶ್ ಬಿರಾದಾರ್, ಅನಿಲ್ ಸಾಹುಕಾರ, ಸಂಜು ದೇಶಮುಖ್, ರವಿಕುಮಾರ್,ಚಂದ್ರಕಾಲ್ ಕೋಟಿಗಿ, ರವಿ ಬೋರವೆಲ್, ಗೌತಮ ಪಾಟೀಲ್,ಅಬ್ದುಲ್, ರಮೇಶ್ ಚಿಂಚೋಳಿ, ವಿವೇಕನಂದ್ ಬಸಿದ್,ಅಮರ್ ,ಪವನ್,ಶ್ರೀನಿವಾಸ,ಶರಣಗೌಡ, ಸಬೇರ್, ಇತರರು ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ