ಖಂಡ್ರೆ ಪರ ಸಹೋದರಿ ಮತಯಾಚನೆ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಹಿರಿಯ ಸಹೋದರಿ ನಾಗಮ್ಮ ಪಾಟೀಲ್ ಪ್ರಚಾರ ನಡೆಸಿದರು.

ತಾಲೂಕಿನ ಕಮಠಾಣ ಸೇರಿ ವಿವಿಧೆಡೆ ಪ್ರಚಾರ‌ನಡೆಸಿದ ನಾಗಮ್ಮ ಪಾಟೀಲ್, ಸರ್ವರ ಹಿತ ಬಯಸುವ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಈಶ್ವರ ಖಂಡ್ರೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುಸಬೇಕು ಎಂದು ಮನವಿ ಮಾಡಿದರು.

ಸುಳ್ಳು ಆಶ್ವಾಸನೆ ನೀಡುವ ಬಿಜೆಪಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರಮುಖರಾದ ರೇಖಾ ವಿಲಾಸ್ ಪಾಟೀಲ್, ಸಾವಿತ್ರಿ ಮರುರ್ಕರ್, ಸುನಿತಾ ಕುಪೇ, ತಾರಾಮಕ, ಸುಕನ್ಯಾ,ನೀತಾ ಶಿವಶೆಟ್ಟೆ, ಪಪ್ಪು ಪಾಟೀಲ್ ಖಾನಾಪುರ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ