ಔರಾದ್ ನಲ್ಲಿ ಗೀತಾ ಖಂಡ್ರೆ ಪ್ರಚಾರ ಕಾಂಗ್ರೆಸ್ ಗೆ ಸಾಥ್‌ ನೀಡಿ

ಬೀದರ್. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಗೀತಾ ಖಂಡ್ರೆ ಮಂಗಳವಾರ ಔರಾದ್ ಪಟ್ಟಣದಲ್ಲಿ ಪ್ರಚಾರ ನಡೆಸಿದರು.
ಔರಾದ್ ನ ಪ್ರಸಿದ ಶ್ರೀ ಅಮರೇಶ್ವರ ದೇವರ ದರ್ಶನ ಪಡೆದು ಗೀತಾ ಖಂಡ್ರೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.

ರಾಜ್ಯದ ಅತಿ ಹಿಂದುಳಿದ ತಾಲೂಕು ಔರಾದ್. ಈ ತಾಲ್ಲೂಕು ಅಭಿವೃದ್ಧಿಯಲ್ಲಿ ಬಹಳ ಹಿಂದಿದೆ. ನೀರಾವರಿ ಸೇರಿ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಥ್. ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರದವರಾದರೂ ಅಭಿವೃದ್ಧಿಗೆ ಕಡೆಗಣಿಸಿದ್ದಾರೆ ಎಂದು ದೂರಿದರು.

ಸುಳ್ಳು ಆರೋಪಗಳನ್ನು ಮಾಡುವುದೇ ಬಿಜೆಪಿ ಚಾಳಿಯಾಗಿದೆ. ಐದು ವರ್ಷಗಳ ಅವಧಿಯಲ್ಲಿ ಖೂಬಾ ಕೆಲಸ ಮಾಡದೆ ಔರಾದ್ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

ಜಿಲ್ಲೆಯ ಅಭಿವೃದ್ಧಿ ಗೆ ಖಂಡ್ರೆ ಪರಿವಾರದ ಕೊಡುಗೆ ಅಪಾರ. ಬೀದರ್ ನ ಸಮಗ್ರ ಅಭಿವೃದ್ಧಿ ಗೆ ಖಂಡ್ರೆ ಅವರಿಂದ ಮಾತ್ರ ಸಾಧ್ಯ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಕ್ಷೇತ್ರದ ಜನತೆ ಅವಕಾಶ ನೀಡಿದರು ಸಹ ವಿಫಲರಾಗುದ್ದಾರೆ. ಹೀಗಾಗಿ ಈ ಬಾರಿ ಯುವಕರ ಕಣ್ಮಣಿಯಾದ ಈಶ್ವರ ಖಂಡ್ರೆ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ವಿಜಯಕುಮಾರ್ ಕೌಡ್ಯಾಳ, ರೆಖಾ ವಿಲಾಸ್ ಪಾಟೀಲ್, ಪಪ್ಪು ಪಾಟೀಲ, ಅನಿಲ್ ಕುಮಾರ್ ನಿರ್ಮಲೆ, ರಾಜಕುಮಾರ್ ಹಲಬುರ್ಗೆ, ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ