ಭಗವಂತ ಖೂಬಾ ಪರ ಬಿಜೆಪಿ ಮುಖಂಡರ ಸಾಮೂಹಿಕ ಪ್ರಚಾರ ಖಂಡ್ರೆ ಅಹಂಗೆ ಸಿಗಲಿದೆ ತಕ್ಕ ಉತ್ತರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಜಿಲ್ಲಾ ಬಿಜೆಪಿ ಮುಂಖಡರು ನಗರದಲ್ಲಿ ಸಾಮೂಹಿಕ ಪ್ರಚಾರ ನಡೆಸಿ, ಕಮಲಪಡೆ ಶಕ್ತಿ ಪ್ರದರ್ಶನ ತೋರಿದರು.

ಯುವ ಮುಖಂಡ ಜಗದೀಶ್ ಬಿರಾದಾರ ಮಾತನಾಡಿ, ಈ ಚುನಾವಣೆ ಭಗವಂತ ಖೂಬಾ ಹಾಗೂ ಈಶ್ವರ ಖಂಡ್ರೆ ಮಧ್ಯೆ ಇಲ್ಲ. ಇದು ದೇಶದ ಸಂರಕ್ಷಣೆ ಚುನಾವಣೆ ಆಗಿದೆ. ಭಾರತ ವಿಶ್ವ ಗುರು ಆಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಾಗಿದೆ ಎಂದರು.

ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ, ಪೌರಾಡಳಿತ ಸಚಿವರಾಗಿ ಕೆಲಸ ಮಾಡಲು ಇವರಿಗೆ ಆಗಿಲ್ಲ. ಜಿಲ್ಲಾ ಸಂಕಿರಣ ಮಾಡಲು ಇವರಿಗೆ ಆಗಿಲ್ಲ. ಇವರು ಸಚಿವರಾಗಿದ್ದ ವೇಳೆ ಹಾಕಿದ ಬಹುತೇಕ ಕಾಮಗಾರಿಗಳು ಇನ್ನೂ ಅನುಷ್ಠಾನ ಗೊಂಡಿಲ್ಲ.

ಖಂಡ್ರೆ ಗೆ ಸಂಸತ್ ಗಿಂತ ಮನೆಗೆ ಕಳುಹಿಸುವುದು ಉತ್ತಮ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು.

ಈಶ್ವರ ಖಂಡ್ರೆ ಜಿಲ್ಲೆಯ ಅಭಿವೃದ್ಧಿ ಬದಲು ಸ್ವಯಂ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದಾರೆ.ಖಂಡ್ರೆ ಅವರ ಅಹಂ ಈ ಚುನಾವಣೆಯಲ್ಲಿ ಪಾಠ ಕಲಿಸಲಿದೆ. ನಾನು ಎನ್ನುವ ಪದಕ್ಕೆ ಈಶ್ವರ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ