ಬಿಸಿಲೂರಿನಲ್ಲಿ ‘ಕೈ’ ನಾಯಕರ ಅಬ್ಬರದ ರೋಡ್ ಶೋ, ನಾಮಪತ್ರ ಸಲ್ಲಿಸಿದ ಈಶ್ವರ ಖಂಡ್ರೆ…

ಬೀದರ್: ಏ .02 . ಭಯಾನಕ ಬಿಸಿಲಿನ ತಾಪದ ನಡುವೆ ಅಬ್ಬರದ ರೋಡ್ ಶೋ ಮೂಲಕ ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಸಿದರು.

ಸಿಎಂ ಎಚ್.ಡಿ ಕುಮಾರಸ್ವಾಮಿ, ಮಲ್ಲಿಕಾರ್ಜುನ್ ಖರ್ಗೆ, ಸಚಿವರಾದ್ ಬಂಡೆಪ್ಪ ಕಾಶೆಂಪೂರ್, ರಾಜಶೇಖರ್ ಪಾಟೀಲ್, ರಹಿಂಖಾನ್, ಶಾಸಕ ಬಿ.ನಾರಾಯಣರಾವ್, ಅಶೋಕ ಖೇಣಿ ಸೇರಿದಂತೆ ಹಲವು ನಾಯಕರು ರೋಡ್ ಶೋದಲ್ಲಿ ಪಾಲ್ಗೊಂಡರು.

ನಗರದ ಬಸವೇಶ್ವರ ವೃತದಿಂದ ಭಗತಸಿಂಗ್ ವೃತದ ಮೂಲಕವಾಗಿ ಶಿವಾಜಿ ಚೌಕ್ ನಿಂದ ನ್ಯಾಶನಲ್ ಕಾಲೇಜು ಮೈದಾನದವರೆಗೆ ರೋಡ್ ಶೋ ಮಾಡಲಾಯಿತು. ನಂತರ ಸಮಾವೇಶ ಸ್ಥಳದಿಂದ ಕಾರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಸಿದರು.

ರೋಡ್ ಶೋದಲ್ಲಿ ಸಾವಿರಾರು ಜನ ಕಾರ್ಯಕರ್ತರು ಭಾಗಿಯಾಗಿ ಸುಡು ಬಿಸಿಲಿನ ನಡುವೆಯೂ ಬ್ಯಾಂಡ್ ಗೆ ಸಕತ್ ಹೆಜ್ಜೆ ಹಾಕುತ್ತ ಬೀದರ್ ಲೋಕ ಅಖಾಡದಲ್ಲಿ ಶಕ್ತಿ ಪ್ರದರ್ಶನ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ