ಮೈಸೂರು-ಕೊಡಗು ಕ್ಷೇತ್ರದಲ್ಲಿ ಐವರ ನಾಮಪತ್ರ ತಿರಸ್ಕರ

ಮೈಸೂರು,ಮಾ.28-ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 30 ಮಂದಿ ಪೈಕಿ ಐವರ ನಾಮಪತ್ರಗಳು ತಿರಸ್ಕøತಗೊಂಡಿವೆ.

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇನ್ನು ಕೆಲವು ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಜೆ.ಜೆ.ಆನಂದ್ , ಬಹುಜನ ಸಮಾಜದ ಪಕ್ಷದ ಎಂ.ಸಿದ್ದರಾಜು, ಸಂಪೂರ್ಣ ಭಾರತ ಕ್ರಾಂತಿ ಪಕ್ಷದ ಎಂ.ಮಧು, ಶಿವಸೇನೆಯ ಎನ್.ಎ.ಸತೀಶ್ ಹಾಗೂ ಪಕ್ಷೇತರ ಅಭ್ಯರ್ಥಿ ಅಖಿಲ್ ಅಹಮದ್ ಅವರ ನಾಮಪತ್ರಗಳು ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅಭಿರಾಮ ಜಿ. ಶಂಕರ್ ತಿಳಿಸಿದ್ದಾರೆ.

ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್‍ನ ಸಿ.ಎಚ್.ವಿಜಯಶಂಕರ್, ಎಸ್‍ಯುಪಿಐ ಪಕ್ಷದ ಪಿ.ಎಸ್.ಸಂಧ್ಯಾ, ಐಎನ್‍ಸಿಪಿಯ ಅಯೂಬ್ ಖಾನ್ ಸೇರಿದಂತೆ 25 ಮಂದಿ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ