ಇಂದು ಆರ್​ಸಿಬಿ- ಮುಂಬೈ ಇಂಡಿಯನ್ಸ್  ನಡುವೆ ಬಿಗ್ ಫೈಟ್: ಗೆಲುವಿನ ಖಾತೆ ತೆರೆಯಲು ಉಭಯ ತಂಡಗಳ  ಪ್ಲಾನ್

ಐಪಿಎಲ್​ನಲ್ಲಿ  ಬದ್ಧ  ವೈರಿಗಳೆನಿಸಿಕೊಂಡಿರುವ  ಆರ್​ಸಿಬಿ ಮತ್ತು  ಮುಂಬೈ ಇಂಡಿಯನ್ಸ್  ತಂಡಗಳು ಮುಖಾಮುಖಿಯಾಗುತ್ತಿವೆ.  ಚಿನ್ನಸ್ವಾಮಿ ಅಂಗಳದಲ್ಲಿ  ನಡೆಯಲಿರುವ  ಹೈವೊಲ್ಟೇಜ್  ಕದನ   ತವರಿನಲ್ಲಿ  ಆಡುತ್ತಿರುವ  ಆರ್​ಸಿಬಿಗೆ ಇದು  ಪ್ರತಿಷ್ಠೆಯ ಪಂದ್ಯವಾದ್ರೆ. ಮುಂಬೈ ಇಂಡಿಯನ್ಸ್  ತಂಡ  ಮೊದಲ ಸೋಲಿನಿಂದ ಹೊರ ಬರುವ ತವಕದಲ್ಲಿದೆ.

ಗಾಯಗೊಂಡ  ಹುಲಿಯಂತಾಗಿವೆ  ಉಭಯ  ತಂಡಗಳು

ಹೌದು ವಿರಾಟ್  ಕೊಹ್ಲಿ ನೇತೃತ್ವದ  ಆರ್​ಸಿಬಿ ಮತ್ತು  ರೋಹಿತ್ ಶರ್ಮಾ ನೇತೃತ್ವದ  ಮುಂಬೈ  ಇಂಡಿಯನ್ಸ್  ತಂಡಗಳು ಗಾಯಗೊಂಡ ಹುಲಿಯಂತಾಗಿವೆ.  ಟೂರ್ನಿಯ  ಉದ್ಘಾಟನಾ  ಪಂದ್ಯದಲ್ಲಿ  ಚೆನ್ನೈ  ವಿರುದ್ಧ  ಆರ್​ಸಿಬಿ  ಹೀನಾಯವಾಗಿ  ಸೋಲುಕಂಡಿತ್ತು. ಇನ್ನು  ಮುಂಬೈ ಇಂಡಿಯನ್ಸ್  ತಂಡ  ಡೆಲ್ಲಿ  ವಿರುದ್ಧ  ತವರಿನಲ್ಲೆ  ಫ್ಲಾಪ್ ಪರ್ಫಾಮನ್ಸ್  ಕೊಟ್ಟು   ತವರಿನ ಅಭಿಮಾನಿಗಳೆದುರು ಮುಖಭಂಗ ಅನುಭವಿಸಿತ್ತು.

ಗೆಲ್ಲಲ್ಲೇಬೇಕಾದ  ಒತ್ತಡದಲ್ಲಿ  ಆರ್​ಸಿಬಿ 

ಮುಂಬೈ  ತವರಿನಲ್ಲಿ  ಮುಂಬೈ  ವಿರುದ್ಧ ಆಡುತ್ತಿರುವ  ಆರ್​ಸಿಬಿ ಇಂದು ಗೆಲ್ಲಲ್ಲೇಬೇಕಾದ ಒತ್ತಡವನ್ನ  ಎದುರಿಸುತ್ತಿದೆ.  ಚೆನ್ನೈ  ವಿರುದ್ಧ  ಸೋತಾಗ ಆರ್​ಸಿಬಿ ಅಭಿಮಾನಿಗಳು ಭಾರೀ  ನಿರಾಸೆ ಅನುಭವಿಸಿದ್ರು.  ಸೋಶಿಯಲ್  ಮೀಡಿಯಾದಲ್ಲಿ  ಆರ್​ಸಿಬಿ  ಭಾರೀ  ಟ್ರೋಲ್ ಆಗಿತ್ತು.  ಮೊದಲ  ಪಂದ್ಯದಲ್ಲಿ  ಸೋತಾಗ  ಈ ಬಾರಿಯೂ  ಕಪ್​ ನಮ್ದಲ್ಲ  ಅಂತ  ಆರ್​ಸಿಬಿ  ಅಭಿಮಾನಿಗಳು  ತಲೆ ಕೆಡಿಸಿಕೊಂಡಿದ್ದಾರೆ.  ಇದು  ಸಹಜವಾಗಿ  ಆರ್​ಸಿಬಿ ಒತ್ತಡವನ್ನ  ಎದುರಿಸುತ್ತಿದೆ.

ಕ್ಯಾಪ್ಟನ್  ಕೊಹ್ಲಿಯನ್ನ  ಚಿಂತೆಗೀಡು ಮಾಡಿದ ತಂಡದ  ಬ್ಯಾಟಿಂಗ್ 

ತಂಡದ  ಬ್ಯಾಟಿಂಗ್  ಡಿಪಾರ್ಟ್​​ಮೆಂಟ್  ಕ್ಯಾಪ್ಟನ್  ಕೊಹ್ಲಿಯನ್ನ ಚಿಂತೆಗೀಡು  ಮಾಡಿದೆ.   ಮೊನ್ನೆ  ಚೆಪಾಕ್  ಅಂಗಳದಲ್ಲಿ   ಚೆನ್ನೈ  ವಿರುದ್ಧ  ತಂಡದ  ಎಲ್ಲ  ಬ್ಯಾಟ್ಸ್​ಮನ್​ಗಳು  ಒಬ್ಬರ  ಹಿಂದೆ  ಒಬ್ಬರು  ಪೆವಿಲಿಯನ್  ಪರೇಡ್  ನಡೆಸಿದ್ರು.  ತಂಡದ  ಓಪನರ್  ಪಾರ್ಥಿವ್  ಪಟೇಲ್  29  ರನ್​ಗಳಿಸಿದ್ದು  ಬಿಟ್ಟರೆ  ತಂಡದ  ಇನ್ನಲ್ಲ  ಬ್ಯಾಟ್ಸ್ ಮನ್​ಗಳು  ಒಂದಂಕಿ  ರನ್  ಗಳಿಸಿದ್ರು.

ಇನ್ನೂ ಬೌಲಿಂಗ್​ ಡಿಪಾರ್ಟ್​ಮೆಂಟ್​​​ನಲ್ಲಿ ವೇಗಿಗಳಾದ ಉಮೇಶ್​ ಯಾದವ್​, ಮೊಹಮ್ಮದ್​ ಸಿರಾಜ್​, ನವದೀಪ್​ ಸೈನಿ ಎದುರಾಳಿಗಳನ್ನ ಆರಂಭದಲ್ಲಿ ಕಟ್ಟಿಹಾಕಬೇಕು. ಸಿಎಸ್​​ಕೆ ವಿರುದ್ಧ ಉತ್ತಮ ದಾಳಿ ಸಂಘಟಿಸಿದ್ದ​​ ಯಜುವೇಂದ್ರ ಚಹಲ್​ ತಮ್ಮ ಚಾರ್ಮ್​ ಮುಂದುವರಿಸಬೇಕಿದೆ. ಜೊತೆಗೆ ಚಹಲ್​​​ಗೆ ಆಲ್ರೌಂಡರ್​​ ಮೊಹಿನ್ ಆಲಿ ಉತ್ತಮ ಸಾಥ್​ ನೀಡಿದ್ರೆ ತವರಲ್ಲಿ ಆರ್​ಸಿಬಿ ವಿಜಯ ಪತಾಕೆ ಹಾರಿಸೋದ್ರಲ್ಲಿ  ಅನುಮಾನವೇ  ಇಲ್ಲ

ಮುಂಬೈ ಇಂಡಿಯನ್ಸ್​​ಗೆ ಆಲ್​​​​ರೌಂಡರ್​​ಗಳ ಬಲ

ಐಪಿಎಲ್​​​ನಲ್ಲಿ ಉತ್ತಮ ಬ್ಯಾಟಿಂಗ್​ ಲೈನ್​ಅಪ್​ ಹೊಂದಿರುವ ಮುಂಬೈ ಇಂಡಿಯನ್ಸ್ ತವರಿನಲ್ಲಿ ಆರ್​​ಸಿಬಿಯನ್ನ ಮಣಿಸುವ ಉತ್ಸುಕದಲ್ಲಿದೆ. ಒಪನರ್​​ಗಳಾದ ರೋಹಿತ್​ ಶರ್ಮಾ, ಕ್ವಿಂಟನ್ ಡಿಕಾಕ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್​​ ಕಿಂಗ್​ ಯುವರಾಜ್​ ಸಿಂಗ್ ಅಬ್ಬರಿಸೋ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಆಲ್ರೌಂಡರ್​ಗಳಾದ ಕಿರನ್ ಪೋಲಾರ್ಡ್, ಹಾರ್ದಿಕ್​​ ಪಾಂಡ್ಯಾ, ಕೃನಾಲ್ ಪಾಂಡ್ಯಾ, ಬೆನ್​ ಕಟ್ಟಿಂಗ್​ ಸಿಡಿದೆದ್ರೆ ಎದುರಾಳಿಗಳು ಉಡೀಸ್ ಆಗೋದು ಗ್ಯಾರಂಟಿ.

ಮುಂಬೈ ಇಂಡಿಯನ್ಸ್​ ಬೌಲಿಂಗ್​ ಡಿಪಾರ್ಟ್​ಮೆಂಟ್​​ ಕೂಡ ಅಷ್ಟೇ ಬಲಿಷ್ಠವಾಗಿದ್ದು ಎದುರಾಳಿಗಳ ಬ್ಯಾಟಿಂಗ್​ ಶಕ್ತಿಯನ್ನೇ ಬುಡಮೇಲು ಮಾಡೋ ತಾಕತ್ತು ಹೊಂದಿದೆ. ಮಿಶೆಲ್ ಮೆಕ್​ಕ್ಲಿನಾಗಾನ್, ಜಮ್ಮು ಎಕ್ಸ್‌ಪ್ರೆಸ್ ರಸೀಖ್ ಸಲಾಂ, ಹಾರ್ದಿಕ್​ ಪಾಂಡ್ಯಾ, ಬೆನ್ ಕಟ್ಟಿಂಗ್​ ಮುಂಬೈ ತಂಡದ ಬೌಲಿಂಗ್​ ಸ್ಟ್ರೆಂಥ್​ ಆಗಿದೆ. ಆಲ್ರೌಂಡರ್​ ಕೃನಾಲ್​ ಪಾಂಡ್ಯಾ, ಸ್ಪಿನ್ನ​ರ್​​ ಮಯಾಂಕ್​ ಮಾರ್ಕಂಡೆ ತಮ್ಮ ಕೈಚಳಕ ತೋರಿಸೋಕೆ ಉತ್ಸುಕರಾಗಿದ್ದಾರೆ.

​ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯದ ಸಮಸ್ಯೆಗೆ ತುತ್ತಾಗಿದ್ದ ಜಸ್‌ಪ್ರೀತ್‌ ಬುಮ್ರಾ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದು, ಇಂದಿನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನೂ ಜಸ್​ಪ್ರೀತ್​​ ಬೂಮ್ರಾ ಕಣಕ್ಕಿಳಿದ್ರೆ, ಮುಂಬೈ ತಂಡದ ಬೌಲಿಂಗ್​ ಬಲ ಮತ್ತಷ್ಟು ಬಲಿಷ್ಠವಾಗಲಿದೆ.

ಒಟ್ಟಾರೆ  ಆರ್​ಸಿಬಿ  ಮತ್ತು  ಮುಂಬೈ ಇಂಡಿಯನ್ಸ್  ಇಂದಿನ  ಕದನದಲ್ಲಿ  ಗೆಲುವಿನ  ಖಾತೆ  ತೆರೆಯಲು  ಹೋರಾಡಲು  ಸಜ್ಜಾಗಿದ್ದು   ಮೊದಲ  ಕಹಿಯನ್ನ ಮರೆಯುವ ಉತ್ಸಾಹದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ