ಚರ್ಚೆಗೆ ಗ್ರಾಸವಾದ ಮಂಕಡ್ ಪ್ರಕರಣ :ಮಂಕಡ್ ಪ್ರಕರಣ ಅಶ್ವಿನ್, ಬಟ್ಲರ್ಗೆ ಇದೇ ಮೊದಲೇನಲ್ಲ..!

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ಪಂಜಾಬ್ ತಂಡದ ನಾಯಕ ಅಶ್ವಿನ್ ಮಂಕಡ್ ರನ್ಔಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಬಟ್ಲರ್ 12.5 ನೇ ಓವರ್ನಲ್ಲಿ ಅಶ್ವಿನ್ ಬೌಲ್ ಮಾಡುವುದಕ್ಕೆ ಮೊದಲೆ ಕ್ರೀಸ್ ಬಿಟ್ಟಿದ್ದರು, ಇದನ್ನು ಗಮನಿಸಿದ ಅಶ್ವಿನ್ ಬೆಲ್ಸ್ ಎಗರಿಸಿ ರನ್ಔಟ್ ಅಪೀಲ್ ಮಾಡಿದರು. ಫೀಲ್ಡ್ ಮೂರನೇ ಅಂಪೈರ್ ಮೊರೆ ಹೋಗಿ ಔಟ್ ಎಂದು ತೀರ್ಮಾನ ನೀಡಿದರು.

ಆದರೆ ಈ ರೀತಿ ಔಟ್ ಮಾಡುವ ಮೂಲಕ ಅಶ್ವಿನ್ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆಂದು ಅವರ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದಾರೆ. ಆದರೆ ಕ್ರಿಕೆಟ್ ಲಾ ಬುಕ್ನಲ್ಲಿ 41.16 ಅಡಿಯಲ್ಲಿ ಬೌಲರ್ ಬಾಲ್ ಎಸೆಯುವುದಕ್ಕೂ ಮುನ್ನ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟಿದ್ದರೆ ಬೌಲರ್ ಆತನನ್ನು ರನ್ಔಟ್ ಮಾಡಬಹುದು.

ಆದರೆ ಈ ರೀತಿ ಔಟ್ ಮಾಡು ವ ಮುನ್ನ ಬ್ಯಾಟ್ಸ್ಮನ್ಗೆ ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದ ಎಚ್ಚರಿಕೆ ನೀಡಬೇಕಾಗುತ್ತದೆ.

ಇಬ್ಬರು ಆಟಗಾರರಿಗೆ ಮಂಕಡ್ ಮೊದಲೇನಲ್ಲಔಟ್ ಮಾಡಿದ ಅಶ್ವಿನ್ ಹಾಗೂ ಔಟ್ ಆದ ಬಟ್ಲರ್ ಇಬ್ಬರಿಗೂ ಇದು ಹೊಸತೇನಲ್ಲ. ಈ ಹಿಂದೆ ಆಶ್ವಿನ್ ಶ್ರೀಲಂಕಾದ ಲಹೆರು ತಿರುಮಾನೆ ಯನ್ನು ಅವರು ಹೀಗೆಯೇ ಔಟ್ ಮಾಡಿದ್ದರು, ಆದರೆ ಅಂದು ಸಚಿನ್ ತೆಂಡೂಲ್ಕರ್ ಮತ್ತು ನಾಯಕ ವೀರೆಂದ್ರ ಸೆಹ್ವಾಗ್ ಅವರು ಕ್ರೀಡಾಸ್ಪೂರ್ತಿ ಮೆರೆದು ಕ್ರೀಡಾ ನಿಯಮದ ಪ್ರಕಾರ ಔಟ್ ಆಗಿದ್ದರೂ ಸಹ ತಿರುಮಾನೆಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು.

ಬಟ್ಲರ್ ಔಟ್ ಆಗಿದ್ದು 2ನೇ ಬಾರಿಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಮಂಕಡ್ಗೆ ಬಲಿಯಾಗುತ್ತಿರುವುದು ಇದು 2ನೇ ಬಾರಿ. ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿಯನ್ನು ಬಟ್ಲರ್ ಮಂಕೆಂಡ್ಗ್‌ಗೆ ಬಲಿಯಾಗಿದ್ದರು, ಆದರೆ ಲಂಕಾದ ಬೌಲರ್ ಸಚಿತ್ರ ಸೇನಾನಾಯಕೆ ಬಟ್ಲರ್‌ಗೆ ಚೆಂಡು ಎಸೆಯುವ ಮುನ್ನ ಕ್ರೀಸ್ ಬಿಡದಂತೆ ಎಚ್ಚರಿಕೆ ನೀಡಿದ್ದರು, ಆದರೆ ಬಟ್ಲರ್ ಅದನ್ನೇ ಮುಂದುವರೆಸಿದಾಗ ಸಚಿತ್ರ ಬೇಲ್ ಎಗರಿಸಿ ಬಟ್ಲರ್ ಅನ್ನು ಔಟ್ ಮಾಡಿದ್ದರು.

ಬಟ್ಲರ್ ಔಟ್ ಮಾಡಿದ್ದನ್ನ ಸಮರ್ಥಿಸಿಕೊಂಡ ಅಶ್ವಿನ್
ಮೊನ್ನೆ ರಾಜಸ್ತಾನ ತಂಡದ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನ ಮಂಕಡ್ ಶೈಲಿಯಲ್ಲಿ ಔಟ್ ಮಾಡಿದನ್ನ ಕೇರಂ ಸ್ಪಿನ್ನರ ಆರ್.ಅಶ್ವಿನ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಶ್ವಿನ್ ಮಾತನಾಡಿದ್ದಾರೆ.

ಕ್ರಿಕೆಟ್ ನಲ್ಲಿ ಇದು ಸಹಜ. ಈ ಹಿಂದೆ ಕೂಡ ಸಾಕಷ್ಟು ಬಾರಿ ಇಂತಹ ಪ್ರಕರಣಗಳು ನಡೆದಿವೆ. ಕ್ರಿಕೆಟ್ ನಿಯಮಗಳ ಅನುಸಾರವೇ ಜಾಸ್ ಬಟ್ಲರ್ ರನ್ನು ಔಟ್ ಮಾಡಲಾಗಿದೆ. ಇಲ್ಲಿ ಕ್ರೀಡಾಸ್ಪೂರ್ತಿಯ ಪ್ರಶ್ನೆ ಎಲ್ಲಿಂದ ಉದ್ಭವಾಗುತ್ತದೆಯೋ ತಿಳಿಯುತ್ತಿಲ್ಲ. ಐಸಿಸಿಯ ರೂಲ್ ಬುಕ್ ನಲ್ಲಿ 41.16 ಅಡಿಯಲ್ಲಿ ಬೌಲರ್ ಚೆಂಡನ್ನು ಎಸೆಯುವ ಮುನ್ನವೇ ಬ್ಯಾಟ್ಸಮನ್ ಕ್ರೀಸ್ ಬಿಟ್ಟಿದ್ದರೆ, ಆಗ ಆತನನ್ನು ರನೌಟ್ ಮಾಡಬಹುದು. ಒಂದು ವೇಳೆ ನಾನು ಮಾಡಿದ್ದು ತಪ್ಪು ಎಂದಾದರೆ ನಾವು ಮೊದಲು ನಿಯಮವನ್ನು ಬದಲಿಸಬೇಕಾಗುತ್ತದೆ. ಆರ್.ಅಶ್ವಿನ್ ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಮಂಕಡ್ ಪ್ರಕರಣ ಕ್ರೀಡಾ ಸ್ಪೂರ್ತಿ ಮತ್ತು ಕ್ರಿಕೆಟ್ನ ನೀತಿ ನಿಯಮಗಳನ್ನ ಪ್ರಶ್ನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ